ಕಾಸರಗೋಡು: ಮಣ್ಣು ತೆಗೆಯುವ ಯಂತ್ರ ಸಣ್ಣ ಹಿಟಾಚಿ ತೊಳೆಯುವ ಮಧ್ಯೆ ಮಗುಚಿಬಿದ್ದು, ಯುವಕ ಮೃತಪಟ್ಟ ಘಟನೆ ಬಂದಡ್ಕದಲ್ಲಿ ನಡೆದಿದೆ. ಮಹಿಳಾ ಕಾಂಗ್ರೆಸ್ ನೇತಾರೆ, ಮಿನಿ ಚಂದ್ರನ್ ಅವರ ಪುತ್ರ ಪ್ರೀತಂಲಾಲ್ ಚಂದ್(22)ಮೃತಪಟ್ಟ ಯುವಕ. ಬಂದಡ್ಕ ಪಡ್ಪು ಎಂಬಲ್ಲಿ ಹಿಟಾಚಿ ತೊಳೆಯುತ್ತಿರುವ ಮಧ್ಯೆ ಮಗುಚಿಬಿದ್ದಿದ್ದು, ಪ್ರೀತಂಲಾಲ್ ಚಂದ್ ಇದರಡಿಯಲ್ಲಿ ಸಿಲುಕಿಕೊಂಡಿದ್ದರು. ತಕ್ಷಣ ಸ್ಥಳೀಯರು ಸೇರಿ ಇವರನ್ನು ಯಂತ್ರದಡಿಯಿಂದ ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದರೂ, ಪ್ರಯೋಜನವಗಿರಲಿಲ್ಲ.
ಮಂಗಳೂರಿನಲ್ಲಿ ಪದವಿ ಮುಗಿಸಿರುವ ಪ್ರೀತಮ್ಲಾಲ್, ತನ್ನ ಸಹೋದರ ಗೌತಮ್ಲಾಲ್ ಚಂದ್ ಅವರಿಗೆ ಮಣ್ಣು ತೆಗೆಯುವ ಯಂತ್ರದಲ್ಲಿ ಸಹಾಯಕರಾಗಿ ಸಹಕರಿಸುತ್ತಿದ್ದರು.