ಪೆರ್ಲ : ಬಾಳೆಮೂಲೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಾಗಿ ಶಾಲಾ ರಕ್ಷಕ ಶಿಕ್ಷಕ ಸಂಘದ ವತಿಯಿಂದ ನಿರ್ಮಿಸಿದ ಪ್ರವೇಶ ದ್ವಾರವನ್ನು ಎಣ್ಮಕಜೆ ಗ್ರಾಮ ಪಂಚಾಯತಿನ ಸದಸ್ಯ ಶಶಿಧರ್ ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಾಲಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು.
ಶಾಲೆಗೆ ಪ್ರವೇಶ ದ್ವಾರವನ್ನು ಕೊಡುಗೆಯಾಗಿ ನೀಡಿದ ಶಾಲಾ ಶಿಕ್ಷಕ ರಕ್ಷಕ ಸಂಘದ ಎಲ್ಲಾ ಸದಸ್ಯರನ್ನು ಈ ಸಂದರ್ಭ ಅಭಿನಂದಿಸಲಾಯಿತು. ಶಾಲೆಯ ನಿವೃತ್ತ ಶಿಕ್ಷಕ ಜನಾರ್ದನ ನಾಯ್ಕ, ನಿವೃತ್ತ ಶಿಕ್ಷಕ ಬಟ್ಯ ಪಾಟಾಳಿ, ಶಾಲಾ ಎಸ್ ಎಂ ಸಿ ಅಧ್ಯಕ್ಷ ಮಹಾಲಿಂಗ, ಶಾಲಾ ಮಾತೃ ಸಂಘದ ಅಧ್ಯಕ್ಷೆ ಪದ್ಮಾವತಿ ಶಾಲಾ ಮುಖ್ಯ ಶಿಕ್ಷಕ ರಾಜೇಶ ಬಿ , ಶಿಕ್ಷಕ ವೃಂದ, ಪಿ ಟಿ ಏ ಸದಸ್ಯರು, ವಿವಿಧ ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದರು.