HEALTH TIPS

ಸಿಲ್ವರ್ ಲೈನ್ ಯೋಜನೆ ಜಾರಿಗೆ ರಾಜ್ಯದಿಂದ ಮತ್ತೆ ಕೇಂದ್ರಕ್ಕೆ ಬೇಡಿಕೆ

               ನವದೆಹಲಿ: ಕೇರಳ ರಾಜ್ಯ ಸರ್ಕಾರ ಮತ್ತೆ ಹಳಿ ಹಿಡಿದಿದೆ. ಸಿಲ್ವರ್ ಲೈನ್ ಯೋಜನೆಯನ್ನು ಆದಷ್ಟು ಬೇಗ ಅನುμÁ್ಠನಗೊಳಿಸಲು ಅನುಮತಿ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರವನ್ನು ಕೋರಿದೆ.

               ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯ ಹಣಕಾಸು ಸಚಿವರುಗಳ ಸಭೆ ಕರೆದಿದ್ದು, ಸಚಿವ ಕೆ. ಎನ್ ಬಾಲಗೋಪಾಲ್ ಈ ಬಗ್ಗೆ ಸಭೆಯಲ್ಲಿ ಆಗ್ರಹಿಸಿದರು. ಯೋಜನೆ ಅನುμÁ್ಠನಕ್ಕೆ ಅನುಮೋದನೆ ನೀಡಬೇಕು ಹಾಗೂ ಮುಂದಿನ ಬಜೆಟ್ ನಲ್ಲಿ ಕೇರಳಕ್ಕೆ 24 ಸಾವಿರ ಕೋಟಿ ರೂ.ಗಳನ್ನು ವಿಶೇಷ ಆರ್ಥಿಕ ಪ್ಯಾಕೇಜ್ ಎಂದು ಘೋಷಿಸಬೇಕು ಎಂದು ಸಚಿವರು ಆಗ್ರಹಿಸಿದರು.

           ಕೇರಳಕ್ಕೆ ಹೈಸ್ಪೀಡ್ ರೈಲಿನ ಅಗತ್ಯವಿದ್ದು, ಅದಕ್ಕಾಗಿ ಸಿಲ್ವರ್ ಲೈನ್ ಯೋಜನೆ ಮಂಜೂರು ಮಾಡಿ ಕೇರಳಕ್ಕೆ ಹೆಚ್ಚಿನ ಎಕ್ಸ್ ಪ್ರೆಸ್ ಪ್ಯಾಸೆಂಜರ್ ರೈಲುಗಳಿಗೆ ಅನುಮತಿ ನೀಡಬೇಕು ಎಂದು ಸಭೆಯಲ್ಲಿ ಹೇಳಿದರು. ಇದಲ್ಲದೆ, ಕೋಝಿಕ್ಕೋಡ್-ವಯನಾಡು ರೈಲ್ವೇ ಸುರಂಗ ಮಾರ್ಗ ನಿರ್ಮಾಣಕ್ಕೆ ತಕ್ಷಣವೇ 5,000 ಕೋಟಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

           ಈ ವರ್ಷದ ಸಾಲದ ಮಿತಿಯನ್ನು ಜಿಎಸ್‍ಡಿಪಿಯ ಶೇ.3.5ಕ್ಕೆ ಹೆಚ್ಚಿಸಬೇಕು. ಕಿಫ್ಬಿ ಮತ್ತು ಪಿಂಚಣಿ ಕಂಪನಿಗಳು ಪಡೆದಿರುವ ಸಾಲವನ್ನು ಈ ವರ್ಷ ಮತ್ತು ಮುಂದಿನ ವರ್ಷದ ಸಾಲದ ಮಿತಿಗೆ ಇಳಿಸುವ ನಿರ್ಧಾರವನ್ನು ಮರುಪರಿಶೀಲಿಸಬೇಕು. 50ರಷ್ಟು ಜಿಎಸ್‍ಟಿಯನ್ನು ರಾಜ್ಯಕ್ಕೆ ನೀಡಬೇಕು. ಸಭೆಯಲ್ಲಿ ರಾಜ್ಯವು ಇತರ ಬೇಡಿಕೆಗಳನ್ನು ಪ್ರಸ್ತಾಪಿಸಿತು.

          ವಸತಿ ಯೋಜನೆಗಳಲ್ಲಿ ಕೇಂದ್ರ ಸರ್ಕಾರದ ಪಾಲು ಹೆಚ್ಚಿಸಬೇಕು ಹಾಗೂ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಬೇಕು ಎಂದು ರಾಜ್ಯ ಒತ್ತಾಯಿಸಿದೆ. ಕೇರಳಕ್ಕೆ ಅರ್ಹ ಸಾಲ ಮಂಜೂರಾಗಿದ್ದರೂ ಕೇಂದ್ರ ಇನ್ನೂ ಅರ್ಹ ಸಾಲ ಮಂಜೂರು ಮಾಡುತ್ತಿಲ್ಲ ಎಂಬ ದೂರು ರಾಜ್ಯದಲ್ಲಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries