HEALTH TIPS

ಕೆ.ಎಸ್.ಆರ್.ಟಿ.ಸಿ ಬಸ್ ಗಳನ್ನು ದಾರಿ ಮಧ್ಯೆ ತಡೆಹಿಡಿಯಬಾರದು: ನೌಕರರಿಗೆ ಕಿರುಕುಳ ನೀಡಿದರೆ ಪ್ರಕರಣ ದಾಖಲು: ಸಚಿವ ಗಣೇಶ್ ಕುಮಾರ್

             ತಿರುವನಂತಪುರ: ಕೆಎಸ್‍ಆರ್‍ಟಿಸಿ ನೌಕರರ ಮೇಲೆ ಹಲ್ಲೆ ನಡೆಸಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಸಾರಿಗೆ ಸಚಿವ ಕೆ.ಬಿ.ಗಣೇಶ್ ಕುಮಾರ್ ಹೇಳಿದ್ದಾರೆ.

            ದಾರಿಯಲ್ಲಿ ಬಸ್‍ಗಳನ್ನು ತಡೆಯುವ ಅಗತ್ಯವಿಲ್ಲ, ನೌಕರರ ಮೇಲೆ ಅತಿಕ್ರಮಣ ಮಾಡಬಾರದು ಎಂದು ಸಚಿವರು ಹೇಳಿದರು. ನೌಕರರನ್ನು ದೈಹಿಕವಾಗಿ ನಿಂದಿಸಬಾರದು ಅಥವಾ ಘಾಠಸಿಗೊಳಿಸಬಾರದು ಎಂದು ಸಚಿವರು ಹೇಳಿದರು.

           ಕಂಡಕ್ಟರ್ ಅಥವಾ ಡ್ರೈವರ್ ನಿಂದಿಸಿದರೆ ಬಸ್ ನಂಬರ್ ರೆಕಾರ್ಡ್ ಮಾಡಿ ಸಿಎಂಡಿ ನಿಯಂತ್ರಣದಲ್ಲಿರುವ ವಾಟ್ಸ್ ಆ್ಯಪ್ ನಂಬರ್ ಗೆ ಕಳುಹಿಸಬಹುದು. ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಚಿವರು ತಿಳಿಸಿದರು. ಉಲ್ಲಂಘನೆ ಕಂಡುಬಂದಲ್ಲಿ ನೌಕರರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಸಚಿವರ ಮಾತು ಕೇಳೋಣ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಸಚಿವರ ಪ್ರತಿಕ್ರಿಯೆ. ಸಂಖ್ಯೆ: 9188619380

        ಒಂದು ವೇಳೆ ರಸ್ತೆಯಲ್ಲಿ ವಾಹನಗಳನ್ನು ತಡೆದರೆ ಪ್ರಯಾಣಿಕರಿಗೆ ಮರುಪಾವತಿ ಮಾಡಲಾಗುವುದು ಎಂದು ತಿಳಿಸಿದರು. ರಾಜ್ಯಾದ್ಯಂತ ಕೆಎಸ್‍ಆರ್‍ಟಿಸಿ ಬಸ್‍ಗಳ ತಡೆ ಹಾಗೂ ನೌಕರರ ಮೇಲೆ ದೌರ್ಜನ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಸಚಿವರ ಈ ನಿರ್ದೇಶನ ಬಂದಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries