ಕಣ್ಣೂರು: ಹಿತ್ತಲಲ್ಲಿ ತೆಂಗಿನಕಾಯಿ ಹೆಕ್ಕಲು ತೆರಳಿದ್ದ ವೇಳೆ ಸ್ಟೀಲ್ ಬಾಂಬ್ ಸ್ಫೋಟಗೊಂಡು ವೃದ್ಧರೊಬ್ಬರು ಮೃತಪಟ್ಟಿರುವ ಪ್ರಕರಣದ ತನಿಖೆ ನಡೆಯುತ್ತಿದೆ.
ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ. ತಲಶ್ಶೇರಿ, ಪಾನೂರು, ಮಟ್ಟನ್ನೂರು ಮತ್ತು ಚೋಕ್ಲಿಯಲ್ಲಿ ಪೋಲೀಸರು ವಿಶೇಷ ತಪಾಸಣೆ ನಡೆಸಲಿದ್ದಾರೆ. ಕಣ್ಣೂರಿನ ಎರಂಜೋಲಿ ಕುಡಕಳಂ ಮೂಲದ ವೇಲಾಯುಧನ್ (75) ನಿನ್ನೆ ಬಾಂಬ್ ಸ್ಫೋಟದಲ್ಲಿ ಮೃತಪಟ್ಟಿದ್ದರು. ಆನವಸತಿ ಇರದ ಖಾಲಿ ನಿವೇಶನದ ಗದ್ದೆಯಲ್ಲಿ ತೆಂಗಿನಕಾಯಿ ಹೆಕ್ಕಲು ತೆರಳಿದ್ದಾಗ ಬಾಂಬ್ ಸ್ಫೋಟ ಸಂಭವಿಸಿತ್ತು.
ಏತನ್ಮಧ್ಯೆ, ಈ ವಿಷಯವನ್ನು ವಿಧಾನಸಭೆಯಲ್ಲಿ ಪ್ರತಿಪಕ್ಷ ಪ್ರಸ್ತಾಪಿಸಿದೆ. ಸಿಪಿಎಂ ಭದ್ರಕೋಟೆಯಲ್ಲಿ ಈ ಘಟನೆ ನಡೆದಿರುವುದು ಸರ್ಕಾರಕ್ಕೆ ಹಿನ್ನಡೆಯಾಗಿದೆ. ಸಿಪಿಐಎಂನ ಅರಿವಿನಿಂದ ಪಕ್ಷದ ಭದ್ರಕೋಟೆಯಲ್ಲಿ ಬಾಂಬ್ ಸಂಗ್ರಹಿಸಲಾಗಿದೆ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಆರೋಪಿಸಿದೆ. ಬಾಂಬ್ ಸ್ಕ್ವಾಡ್ ಜಮೀನು ಹಾಗೂ ಮನೆಯಲ್ಲಿ ಶೋಧ ನಡೆಸಿದರೂ ಹೆಚ್ಚಿನ ಸ್ಫೋಟಕಗಳು ಪತ್ತೆಯಾಗಿಲ್ಲ. ಇದೀಗ ಬಾಂಬ್ ಎಲ್ಲಿಂದ ಬಂತು ಎಂಬ ತನಿಖೆಯನ್ನು ಪೆÇಲೀಸರು ತೀವ್ರಗೊಳಿಸಿದ್ದಾರೆ.