HEALTH TIPS

ಮುಜುಂಗಾವು ವಿದ್ಯಾಪೀಠದ ಪ್ರವೇಶೋತ್ಸವ -ಸ್ವಾಗತ ಭಾರತೀ

          ಕುಂಬಳೆ: ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದ 2024-25 ನೇ ಸಾಲಿನ ಪ್ರವೇಶೋತ್ಸವ  ಸ್ವಾಗತ ಭಾರತೀ ಕಾರ್ಯಕ್ರಮ ಸೋಮವಾರ ಶಂಖನಾದ,ಧ್ವಜಾರೋಹಣ ಹಾಗೂ ದೀಪಪ್ರಜ್ವಲನೆ ಯೊಂದಿಗೆ ನಡೆಯಿತು.

              ಕ್ಯಾಂಪ್ಕೋ ಉಪಾಧ್ಯಕ್ಷ ಶಂ.ನಾ.ಖಂಡಿಗೆ ಮುಖ್ಯ ಅತಿಥಿಗಳಾಗಿ ಮಾತನಾಡಿ, ಈ ವಿದ್ಯಾಪೀಠದ ವಿದ್ಯಾರ್ಥಿಗಳು ದೇಶವನ್ನು ಬೆಳಗುವ ದೀಪಗಳಾಗಲಿ ಎಂದು ಶುಭಹಾರೈಸಿ, ಬದಲಾಗುತ್ತಿರುವ ಭಾರತದ ದೀಪಗಳು ನೀವಾಗಬೇಕೆಂದು ಕರೆ ನೀಡಿದರು. 


             ಶಾಲಾ ಆಡಳಿತ ಸಮಿತಿ ಅಧ್ಯಕ್ಷ ಎಸ್.ಎನ್ ರಾವ್ ಮುನ್ನಿಪ್ಪಾಡಿ  ಹಾಗೂ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಚೆಕ್ಕಣಿಕೆ ಬಾಲಕೃಷ್ಣ ಭಟ್ ಶುಭಹಾರೈಸಿದರು. ಆಡಳಿತ ಸಮಿತಿ ಕಾರ್ಯದರ್ಶಿ ಶ್ಯಾಮರಾಜ ದೊಡ್ಡಮಾಣಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾಲಯ ಮುಂದಿನ ವರ್ಷ ಬೆಳ್ಳಿ ಹಬ್ಬವನ್ನಾಚರಿಸಲಿದೆ. ಈ ಶುಭಸಂದರ್ಭದಲ್ಲಿ ಎಲ್ಲರ ಸಹಕಾರ ಅತ್ಯಂತ ಅವಶ್ಯವೆಂದರಲ್ಲದೆ, ವಿದ್ಯಾಲಯದ ಸಾಧನೆಗಳನ್ನು ತೆರೆದಿಟ್ಟರು. ಮುಖ್ಯ ಅಧ್ಯಾಪಕÀ ಶ್ಯಾಂಭಟ್ ದರ್ಭೆಮಾರ್ಗ 24 ನೇ ವರ್ಷಕ್ಕೆ ಕಾಲಿಟ್ಟ ಈ ವಿದ್ಯಾಸಂಸ್ಥೆಯ ಹಾಗೂ ವಿದ್ಯಾರ್ಥಿಗಳ  ಶ್ರೇಯೋಭಿವೃದ್ಧಿಯ ಬಗ್ಗೆ ಮಾತನಾಡಿದರು. ಸಹ ಮುಖ್ಯೋಪಾಧ್ಯಾಯಿನಿ ಚಿತ್ರಾಸರಸ್ವತಿ ಉಪಸ್ಥಿತರಿದ್ದು ಶುಭಹಾರೈಸಿದರು. ನೂತನ ವಿದ್ಯಾರ್ಥಿಗಳಿಗೆ ಕಲಿಕೋಪಕರಣಗಳನ್ನು ನೀಡಿ ಸ್ವಾಗತಿಸಲಾಯಿತು.


            ಹತ್ತನೇತರಗತಿಯ ವಿದ್ಯಾರ್ಥಿನಿಯರು ಪ್ರಾರ್ಥನೆಯನ್ನು ಹಾಡಿ, ಶಿಕ್ಷಕಿಯರಾದ ವಿದ್ಯಾಲಕ್ಷ್ಮಿ ಸ್ವಾಗತಿಸಿ, ಶ್ರೀದೇವಿ ಮಾತಾಶ್ರೀ ವಂದಿಸಿದರು. ಶಿಕ್ಷಕಿ ಸೌಮ್ಯಾ.ಪಿ  ನಿರೂಪಿಸಿದರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries