HEALTH TIPS

ಮುಂಬೈ ಹೋರ್ಡಿಂಗ್ ದುರಂತ: ಗೋವಾದಲ್ಲಿ ಇನ್ನಿಬ್ಬರ ಬಂಧನ

          ಮುಂಬೈ: ಮುಂಬೈನ ಘಾಟ್ಕೋಪರ್‌ ಪ್ರದೇಶದಲ್ಲಿ 17 ಜನರ ಸಾವಿಗೆ ಕಾರಣವಾಗಿದ್ದ ಹೋರ್ಡಿಂಗ್‌ ಕುಸಿತ ಪ್ರಕರಣ ಸಂಬಂಧ ಇನ್ನಿಬ್ಬರು ವ್ಯಕ್ತಿಗಳನ್ನು ಗೋವಾದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

             ಜಾಹ್ನವಿ ಮರಾಠೆ ಹಾಗೂ ಸಾಗರ್‌ ಪಾಟೀಲ್ ಎಂಬಿಬ್ಬರನ್ನು ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ.

           ಇವರು ಹೋರ್ಡಿಂಗ್ ನಿರ್ಮಾಣ ಸಂಸ್ಥೆ ಎಗೊ ಮಿಡಿಯಾ ‍ಪ್ರೈವೆಟ್‌ ಲಿಮಿಟೆಡ್‌ಗೆ ಸಂಬಂಧಿಸಿದವರು. ಅಲ್ಲಿಗೆ ‍ಪ್ರಕರಣ ಸಂಬಂಧ ಬಂಧಿತರ ಸಂಖ್ಯೆ ನಾಲ್ಕಕ್ಕೇರಿದೆ.

          ಕಳೆದ ವರ್ಷ ಡಿಸೆಂಬರ್‌ವರೆಗೂ ಸಂಸ್ಥೆಯ ಜೊತೆ ನಿರ್ದೇಶಕರಾಗಿದ್ದ ಮರಾಠೆ, ಈ ಹೋರ್ಡಿಂಗ್ ಸಂಬಂಧ ಹಣಕಾಸು ಲಾಭಗಳನ್ನು ಪಡೆದುಕೊಂಡಿದ್ದರು. ಪಾಟೀಲ್ ಈ ಹೋರ್ಡಿಂಗ್‌ನ ಗುತ್ತಿಗೆದಾರರಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

               ಈ ಹಿಂದೆ ಎಗೊ ಮಿಡಿಯಾ ಸಂಸ್ಥೆಯ ನಿರ್ದೇಶಕ ಭವೇಶ್ ಕುಮರ್‌ ಹಾಗೂ ಸ್ಟ್ರಕ್ಚರಲ್ ಎಂಜಿನಿಯರ್ ಮನೋಜ್ ಸಂಘು ಅವರನ್ನು ಅವರನ್ನು ಬಂಧಿಸಲಾಗಿತ್ತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries