HEALTH TIPS

ಕಂಚಿಕಟ್ಟೆಯಲ್ಲಿ ತಂಬಾಕು ವಿರೋಧಿ ದಿನಾಚರಣೆ: ಉತ್ತಮ ಸಂಸ್ಕಾರದಿಂದ ದುಶ್ಚಟದಿಂದ ದೂರ ಉಳಿಯಬಹುದು : ಗಣೇಶ್ ಆಚಾರ್ಯ

             ಕುಂಬಳೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಬಿ ಸಿ ಟ್ರಸ್ಟ್(ರಿ) ಮಂಜೇಶ್ವರ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ಇವರ ಸಹಯೋಗದಲ್ಲಿ ಕುಂಬಳೆ ಸಮೀಪದ ಕಂಚಿಕಟ್ಟೆಯಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಪ್ರಯುಕ್ತ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

                 ಜನ ಜಾಗೃತಿ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯ ಅವರು  ದುಶ್ಚಟ ಮುಕ್ತ ಸಮಾಜ  ನಿರ್ಮಾಣಕ್ಕೆ ಹೆತ್ತವರು ಹೇಗೆ ಮಕ್ಕಳಿಗೆ ಸಂಸ್ಕಾರ ನೀಡಬೇಕು ಹಾಗೂ ಪೂಜ್ಯರು ಸಮಾಜಕ್ಕೆ ನೀಡುತ್ತಿರುವ ಕಾರ್ಯಕ್ರಮಗಳ ಬಗ್ಗೆ ಮನ ಮುಟ್ಟುವಂತೆ  ಮಾಹಿತಿ ನೀಡಿದರು. 


               ಜನಜಾಗೃತಿ ವೇದಿಕೆ ಕಾಸರಗೋಡು ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಅಶ್ವಥ್ ಪೂಜಾರಿ ಲಾಲ್ ಬಾಗ್ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಯೋಜನೆಯಿಂದ ಸಮಾಜದ  ಕಟ್ಟಕಡೆಯ  ಕುಟುಂಬ ಅಭಿವೃದ್ಧಿ ಹೊಂದಿರುವ ಬಗ್ಗೆ ಸಮಗ್ರವಾಗಿ ಮಾಹಿತಿ ನೀಡಿದರು. 

                ಮಹಾದೇವ ನವಜೀವನ  ಸಮಿತಿ ಉಪಾಧ್ಯಕ್ಷ ನಾರಾಯಣ ಅನಿಸಿಕೆ ವ್ಯಕ್ತ  ಪಡಿಸಿದರು. ಕುಂಬಳೆ ವಲಯ  ಅಧ್ಯಕ್ಷೆ ಕಸ್ತೂರಿ ಶುಭ ಹಾರೈಸಿದರು. ಮೇಲ್ವಿಚಾರ ರಮೇಶ್, ರುತೇಶ್, ಮೋಹನ್, ನಾರಾಯಣ ಉಪಸ್ಥಿತರಿದ್ದರು. ಸೇವಾಪ್ರತಿನಿಧಿ ಸಂಧ್ಯಾ ಸ್ವಾಗತಿಸಿ, ಸುಜಾತಾ ವಂದಿಸಿದರು. ಪುಷ್ಪಲತಾ ಪುರುμÉೂೀತ್ತಮ್ ಆಚಾರ್ ಕಾರ್ಯಕ್ರಮ ನಿರೂಪಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries