ಕಾಸರಗೋಡು: ಕಟ್ಟಡ ಸಂಖ್ಯೆ ಮಂಜೂರು ಮಾಡುವಂತೆ ಮಾನವ ಹಕ್ಕುಗಳ ಆಯೋಗದ ಆದೇಶವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ದೂರಲಾಗಿದೆ.
ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ತ್ರಿಕರಿಪುರ ಇಳಂಬಚ್ಚಿಯ ಬಾಲನ್ ಎಂಬವರು ಮುಖ್ಯಮಂತ್ರಿಗೆ ದೂರು ಸಲ್ಲಿಸಿದ್ದರು.
ಹಲವು ವರ್ಷಗಲಿಂದ ರೈಲ್ವೇ ಹಳಿ ಸಮೀಪದ ಕಾರಣ ಸಂಕಷ್ಟಕ್ಕೆ ಸಿಲುಕಿರುವ ಅವರಿಗೆ ಎರಡು ತಿಂಗಳೊಳಗೆ ವರದಿ ಸಲ್ಲಿಸುವಂತೆ ತ್ರಿಕರಿಪುರ ಪಂಚಾಯಿತಿ ಕಾರ್ಯದರ್ಶಿಗೆ ಆಯೋಗ ಸೂಚನೆ ನೀಡಿತ್ತು.
ಆದೇಶದಂತೆ ಕಟ್ಟಡ ಸಂಖ್ಯೆಗೆ ಅರ್ಜಿ ಸಲ್ಲಿಸಿ ಗಡುವು ಮುಗಿದರೂ ಪಂಚಾಯಿತಿ ಅಧಿಕಾರಿಗಳು ಯಾವುದೇ ಉತ್ತರ ನೀಡದ ಕಾರಣ ಬಾಲನ್ ಕಾರ್ಯದರ್ಶಿ ಬಳಿ ತೆರಳಿ ಕಟ್ಟಡ ಸಂಖ್ಯೆ ಕೇಳಿದ್ದರು. ಆದರೆ ದೂರದ ಬಗ್ಗೆ ಮತ್ತೊಮ್ಮೆ ಮನವರಿಕೆ ಮಾಡಿಕೊಡಬೇಕು ಹಾಗೂ ಎರಡು ತಿಂಗಳ ಕಾಲಾವಕಾಶವಿದೆ ಎಂದು ಕಾರ್ಯದರ್ಶಿ ಕುಂಟು ನೆಪ ಹೇಳಿ ಬಾಲನ್ ಅವರಿಗೆ ವಂಚಿಸಿದ್ದಾರೆ ಎಂದು ಮುಖ್ಯಮಂತ್ರಿಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಮೇಲ್ಸೇತುವೆ ಅದಾಲತ್ ಸಮಿತಿ ಸೇರಿದಂತೆ ಬಾಲನ್ ಅವರ ಕಟ್ಟಡ ರೈಲು ಮಾರ್ಗದಿಂದ ಸ್ವಲ್ಪ ದೂರದಲ್ಲಿ ಇರುವುದು ಕಂಡು ಬಂದಿದ್ದು ವರದಿಯಾಗಿದೆ. ಇದ್ಯಾವುದನ್ನೂ ಒಪ್ಪಿಕೊಳ್ಳಲು ಈ ಅಧಿಕಾರಿ ಸಿದ್ಧವಿಲ್ಲ.
2014ರಲ್ಲಿ ತ್ರಿಕರಿಪುರ ಪಂಚಾಯಿತಿ ಬಾಲನ್ಗೆ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿತ್ತು. ಆದರೆ ಕಟ್ಟಡದ ಪರವಾನಿಗೆಯನ್ನು ನಂತರ ನವೀಕರಿಸಲಾಯಿತು ಮತ್ತು 2019 ರಲ್ಲಿ ಪೂರ್ಣಗೊಂಡ ಕಟ್ಟಡದ ತೆರಿಗೆಯನ್ನು ಪಂಚಾಯತಿ ಸ್ವೀಕರಿಸಿದೆ ಎಂದು ಬಾಲನ್ ಹೇಳಿಕೆ ನೀಡಿದ್ದಾರೆ. ಪಂಚಾಯಿತಿಯ ತಪ್ಪಿನಿಂದಾಗಿ ವರ್ಷಗಟ್ಟಲೆ ಅಲೆದಾಡುತ್ತಿರುವ ಈ ವೃದ್ದರಿಗೆ ನ್ಯಾಯ ಕೊಡಿಸಬೇಕೆಂಬ ಮಾನವ ಹಕ್ಕುಗಳ ಆಯೋಗದ ಆದೇಶಕ್ಕೂ ಎರಡು ತಿಂಗಳವರೆಗೆ ಕಾಲಾವಕಾಶವಿದೆ ಎಂಬ ಕಾರಣ ನೀಡಿ ಅವಮಾನ ಮಾಡಲಾಗುತ್ತಿದೆ ಎಂಬುದು ಬಾಲನ್ ಅವರ ಆರೋಪ.
ಪಂಚಾಯಿತಿ ಅಧಿಕಾರಿಗಳು ಕಟ್ಟಡ ಸಂಖ್ಯೆ ನೀಡಲು ಸಿದ್ಧರಿಲ್ಲದಿದ್ದರೆ ಪಂಚಾಯಿತಿ ಅನುಮತಿ ಮೇರೆಗೆ ಕಟ್ಟಡ ನಿರ್ಮಿಸಿರುವ ತಮಗೆ ಆಗಿರುವ ಅಪಾರ ಆರ್ಥಿಕ ನಷ್ಟವನ್ನು ವಸೂಲಿ ಮಾಡಿ ಇಲಾಖಾ ಕ್ರಮ ಜರುಗಿಸುವಂತೆ ಮುಖ್ಯಮಂತ್ರಿ ಹಾಗೂ ಇಲಾಖಾ ಸಚಿವರಿಗೆ ದೂರು ನೀಡಲಾಗಿದೆ.