ಸಮರಸ ಚಿತ್ರಸುದ್ದಿ: ಮಂಜೇಶ್ವರ: ಎಸ್.ಎ.ಟಿ. ಹೈಸ್ಕೂಲ್ ಮಂಜೇಶ್ವರ ಇಲ್ಲಿನ ಇಕೋ ಕ್ಲಬ್ ವತಿಯಿಂದ ನಡೆದ ಪೇಪರ್ ಬ್ಯಾಗ್ ನಿರ್ಮಾಣ ಕಾರ್ಯಗಾರದಲ್ಲಿ ಶಾಲಾ ಇಕೋ ಕ್ಲಬ್ ಸಂಚಾಲಕ ಜಯಪ್ರಕಾಶ್ ಶೆಟ್ಟಿ ಬೇಳ ತರಬೇತಿ ನೀಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಸುರೇಖಾ ಮಲ್ಯ ಉಪಸ್ಥಿತರಿದ್ದರು. ದೈಹಿಕ ಶಿಕ್ಷಕರಾದ ಶ್ಯಾಮ ಕೃಷ್ಣ ಪ್ರಕಾಶ ಅವರು ಸಹಕಾರ ನೀಡಿದರು.