ಕಾಸರಗೋಡು: ಆಲ್ ಕೇರಳ ಫೆÇೀಟೋಗ್ರಾಫರ್ಸ್ ಅಸೋಸಿಯೇಷನ್(ಎಕೆಪಿಎ)ಕಾಸರಗೋಡು ವೆಸ್ಟ್ಯೂನಿಟ್ ವತಿಯಿಂದ ಶಾಲಾ ಪ್ರವೇಶೋತ್ಸವ ಅಂಗವಾಗಿ ಕಾಸರಗೋಡು ಬೀರಂತಬೈಲು ಸರ್ಕಾರಿ ವೆಲ್ಫೇರ್ ಎಲ್.ಪಿ. ಶಾಲಾಮಕ್ಕಳಿಗೆ ಕಲಿಕೋಪಕರಣ ವಿತರಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕಿ ವಿಜಯ ಕುಮಾರಿ ಬಿ. ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ನಗರಸಭಾ ಸದಸ್ಯೆ ವೀಣಾ ಅರುಣ್ ಅವರು ಮಕ್ಕಳಿಗೆ ಪುಸ್ತಕವನ್ನು ನೀಡುವುದರ ಮೂಲಕಕಾರ್ಯಕ್ರಮ ಉದ್ಘಾಟಿಸಿದರು. ಯೂನಿಟ್ ಅಧ್ಯಕ್ಷ ಮೈಂದಪ್ಪ ಕೆ.ಎಂ, ಎಕೆಪಿಎ ಜಿಲ್ಲಾ ಸಮಿತಿ ಸದಸ್ಯ ರತೀಶ್ ರಾಮುವಿಡಿಯೋ, ಎಕೆಪಿಎ ಕಾಸರಗೋಡು ವಲಯ ಅಧ್ಯಕ್ಷ ವಾಸು.ಎ, ವಲಯ ಪಿ.ಆರ್.ಒ ಚಂದ್ರಶೇಖರ.ಎಂ, ಉಪಾಧ್ಯಕ್ಷ ಹಾಗೂ ಸಾಂತ್ವನ ಕೋರ್ಡಿನೇಟರ್ ಗಣೇಶ್ ರೈ, ಯೂನಿಟ್ ಕೋಶಾಧಿಕಾರಿ ಅಮಿತ್, ಯೂನಿಟ್ ಜತೆ ಕಾರ್ಯದರ್ಶಿ ವಿಶಾಖ್, ಯೂನಿಟ್ ನಿರೀಕ್ಷಕ ಪ್ರಮೊದ್ ಐಫೆÇೀಕಸ್, ಯೂನಿಟ್ ಸದಸ್ಯ ಅಭಿಷೇಕ್.ಸಿ ಹಾಗೂ ಶಿಕ್ಷಕಿಯರದ ಸ್ನೇಹ ಟೀಚರ್, ಸಹಾಯಕಿ ದೇವಕಿ ಮತ್ತು ಪುಟಾಣಿಗಳು ಉಸ್ಥಿತರಿದ್ದರು. ಯೂನಿಟ್ ಕಾರ್ಯದರ್ಶಿ ವಸಂತ್ ಕೆರೆಮನೆ ಸ್ವಾಗತಿಸಿದರು. ಸುಚಿತ್ರ ಟೀಚರ್ ವಂದಿಸಿದರು.