HEALTH TIPS

ಮಲಯಾಳಂ ಚಿತ್ರರಂಗಕ್ಕೆ ಮಾಡಂಬನ್ ಅವರ ಕೊಡುಗೆ ಅಪಾರ: ಶ್ರೀನಿವಾಸನ್

                    ಕೊಚ್ಚಿ: ಮಲಯಾಳಂ ಚಿತ್ರರಂಗಕ್ಕೆ ಮಾಡಂಬನ್  ಅವರ ಕೊಡುಗೆ ದೊಡ್ಡದು ಎಂದು ನಟ ಮತ್ತು ಬರಹಗಾರ ಶ್ರೀನಿವಾಸನ್ ಹೇಳಿದ್ದಾರೆ.

                  ದೇಶಾಟನಂ ಚಿತ್ರದ ಪ್ರೀಪ್ರೋ ನೋಡಿದಾಗ ಮಾಡಂಬನ್ ಅವರನ್ನು ಖುದ್ದಾಗಿ ಭೇಟಿಯಾಗಬೇಕೆಂದುಕೊಂಡಿದ್ದೆ. ಆದರೆ ಅದು ಮತ್ತೆಂದೂ ಸಂಭವಿಸಲಿಲ್ಲ ಎಂದವರು ತಿಳಿಸಿದರು.

                  ಶ್ರೀನಿವಾಸನ್ ಅವರು ತಪಸ್ಯ ಕಲಾ ಸಾಹಿತ್ಯ ವೇದಿಕೆಯ ಮಾಡಂಬನ್ ಕುಂಜುಕುಟ್ಟನ್ ಸ್ಮಾರಕ ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಿದ್ದರು.

                  ಶ್ರೀನಿವಾಸನ್ ಅವರ ತ್ರಿಪುಣಿತುರ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ತಪಸ್ಯ ರಾಜ್ಯ ಕಾರ್ಯಾಧ್ಯಕ್ಷ ಪ್ರೊ. ಪಿಜಿ ಹರಿದಾಸ್ ಪ್ರಶಸ್ತಿ ಪ್ರದಾನ ಮಾಡಿದರು.

                   ರಾಜ್ಯ ಸಹ ಕಾರ್ಯದರ್ಶಿ ಸಿ.ಸಿ. ಸುರೇಶ್, ಕಾರ್ಯದರ್ಶಿ ಟಿ.ಎಸ್. ನೀಲಾಂಬರನ್ ಮತ್ತು ಸಂಸ್ಕಾರ ಭಾರತಿ ದಕ್ಷಿಣ ಕ್ಷೇತ್ರೀಯ ಪ್ರಮುಖ್ ತಿರೂರ್ ರವೀಂದ್ರನ್ ಉಪಸ್ಥಿತರಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries