ಕಾಸರಗೋಡು: ಜಿಲ್ಲಾ ಮಾಹಿತಿ ಕಛೇರಿ, ಕಾಸರಗೋಡು ಜಿಲ್ಲಾಡಳಿತ ಹಾಗೂ ಕಲೆಕ್ಟರೇಟ್ ಅಕ್ಷರ ಗ್ರಂಥಾಲಯದ ಸಹಯೋಗದಲ್ಲಿ ವಾಚನಾ ವಾರಾಚರಣೆ ಜಿಲ್ಲಾ ಮಟ್ಟದ ಉದ್ಘಾಟನೆ ಜೂ. 19ರಂದು ಬೆಳಗ್ಗೆ 11ಕ್ಕೆ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಲಿರುವುದು.
ಇದೇ ಸಂದರ್ಭ ಪಿ.ಎನ್.ಪಣಿಕ್ಕರ್ ಸಂಸ್ಮರಣಾ ಕಾರ್ಯಕ್ರಮ ನಡೆಯುವುದು. ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಸಮಾರಂಬ ಉದ್ಘಾಟಿಸುವರು. ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ(ಎಡಿಎಂ)ಕೆ.ವಿ.ಶ್ರುತಿ ಅಧ್ಯಕ್ಷತೆ ವಹಿಸುವರು. ಮಹಾಕವಿ ಪಿ. ಕಾವ್ಯ ಪುರಸ್ಕøತ ದಿವಾಕರನ್ ವಿಷ್ಣುಮಂಗಲಂ ಆಶಯ ಭಾಷಣ ಮಾಡುವÀರು.
ಕಾಸರಗೋಡು ತಾಲೂಕು ಗ್ರಂಥಾಲಯ ಪರಿಷತ್ ಅಧ್ಯಕ್ಷ ಇ. ಜನಾರ್ದನನ್ ಪಿ.ಎನ್.ಪಣಿಕ್ಕರ್ ಸಂಸ್ಮರಣೆ ನಡೆಸುವರು. ಜಿಲ್ಲಾ ಶಿಕ್ಷಣ ಪ್ರಭಾರ ಉಪನಿರ್ದೇಶಕ ವಿ. ದಿನೇಶ್, ಸ್ಥಳೀಯಾಡಳಿತ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕ ಜೇಸನ್ ಮ್ಯಾಥ್ಯೂ, ಜಿಲ್ಲಾ ಸಾಕ್ಷರತಾ ಮಿಷನ್ ಸಂಯೋಜಕ ಪಿ.ಎನ್.ಬಾಬು ಪಾಲೊಳ್ಳುವರು.