ಮಧೂರು: ಉಳಿಯ ತರುಣ ಕಲಾ ವೃಂದದ ಕಾರ್ಯಕಾರಿಣಿ ಸಭೆ ವಿಠಲ ಗಟ್ಟಿ ಪರಕ್ಕಿಲ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ಜರಗಿತು. ಗತ ವರ್ಷದ ವರದಿಯನ್ನು ಅಜಿತ್ ಕುಮಾರ್ ಗಟ್ಟಿ ಹಾಗೂ ಲೆಕ್ಕಪತ್ರ ವನ್ನು ಅರುಣ್ ರಾಜ್ ಪರಕ್ಕಿಲ ಅವರು ಮಂಡಿಸಿದರು. ಚರ್ಚಿಸಿ ಅಂಗೀಕರಿಸಲಾಯಿತು. ಮಧೂರು ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಸಿ.ಎಚ್. ನಾರಾಯಣ ಅಡಿಗರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಚರ್ಚೆಯಲ್ಲಿ ಬಾಲಕೃಷ್ಣ ನಂಬೀಶನ್, ಪ್ರಭಾಕರ ಉಳಿಯ, ಸುರೇಶ್ ಯು.ಆರ್, ಉದಯ ಜಪ್ಪ, ವಾಸು, ಸುರೇಶ್ ಗುಡ್ಡೆ, ಜಗದೀಶ್ ಪರಕ್ಕಿಲ, ದಿನೇಶ್ ಜಪ್ಪ, ಮುಂತಾದವರು ಭಾಗವಹಿಸಿದ್ದರು. ಪದ್ಮರಾಜ ಗಟ್ಟಿ ಸ್ವಾಗತಿಸಿ, ಅಜಿತ್ ಕುಮಾರ್ ಗಟ್ಟಿ ವಂದಿಸಿದರು.