HEALTH TIPS

'ಇದು ವಡಗರ ಜನತೆಯ ಆಶೀರ್ವಾದ: ವಡಗರದಲ್ಲಿ ಗೆದ್ದು ಬೀಗಿದ ಶಾಫಿ ಪರಂಬಿಲ್

              ವಡಗರ: ಲೋಕಸಭೆ ಚುನಾವಣೆಯಲ್ಲಿ ಭಾರಿ ಗೆಲುವು ಸಾಧಿಸಿದ ವಡಕರ ಜನತೆಗೆ ಯುಡಿಎಫ್ ಕೃತಜ್ಞತೆ ಸಲ್ಲಿಸಿತು. ಅಭ್ಯರ್ಥಿ ಶಾಫಿ ಪರಂಬಿಲ್ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ.

              ಗೆಲುವಿನ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಫಿ ಪರಂಬಿಲ್  ಯುಡಿಎಫ್ ನ ರಾಜಕೀಯ ಗೆಲುವು ಮತ್ತು ಸಂಪೂರ್ಣ ಶ್ರೇಯಸ್ಸು ವಡಗರದ ಜನತೆಗೆ ಸಲ್ಲುತ್ತದೆ ಎಂದು ಹೇಳಿದರು.

                'ರಾಜಕೀಯ ಪ್ರಜ್ಞೆಯುಳ್ಳ ಜನರ ರಾಜಕೀಯ ಯಶಸ್ಸನ್ನು ನಮಗೆ ವಡಗÀರ ಜನತೆ ನೀಡಿದ್ದಾರೆ. ಇದು ವಡಗರದ  ಜಾತ್ಯತೀತ ಮನಸ್ಸಿನ ಗೆಲುವು. ಇದು ಅಲ್ಲಿನ ಜನರ ರಾಜಕೀಯ ಪ್ರಜ್ಞೆಯ ಗೆಲುವು. ಇದು ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ಮೌಲ್ಯಗಳನ್ನು ಹಿಡಿದಿಟ್ಟುಕೊಂಡವರ ವಿಜಯವಾಗಿದೆ. ಸಂಪೂರ್ಣ ಶ್ರೇಯ ವಡಗÀರ ಜನತೆಗೆ ಸಲ್ಲುತ್ತದೆ. ಅನಿವಾರ್ಯ ಗೆಲುವಿಗಾಗಿ ವಡಗರದ ಜನತೆಯನ್ನು ಪ್ರಜಾಸತ್ತಾತ್ಮಕವಾಗಿ ಮತ್ತು ಜಾತ್ಯತೀತ ರೀತಿಯಲ್ಲಿ ಸಂಪರ್ಕಿಸಿದ ಯುನೈಟೆಡ್ ಡೆಮಾಕ್ರಟಿಕ್ ಪ್ರ್ರಂಟ್ ಮತ್ತು ಆರ್‍ಎಂಪಿ ಸೇರಿದಂತೆ ನಮಗಾಗಿ ದುಡಿದ ಎಲ್ಲ ಸಹೋದ್ಯೋಗಿಗಳಿಗೆ ಹೃತ್ಪೂರ್ವಕ ವಂದನೆಗಳು ಎಂದು ಶಾಫಿ ಹೇಳಿದರು.

             ಪಾಲಕ್ಕಾಡ್ ಉಪಚುನಾವಣೆ ಅಗತ್ಯವಿಲ್ಲ ಎಂದು ಬಿಜೆಪಿ ಹೇಳಿದೆ. ರಾಜ್ಯಾಧ್ಯಕ್ಷ ಹಾಗೂ ಸಿಪಿಎಂ ವಾದ ತಪ್ಪು ಎಂಬುದನ್ನು ವಡಕರ ಜನತೆ ಸಾಬೀತುಪಡಿಸಿದ್ದಾರೆ. ಪಾಲಕ್ಕಾಡ್ ಜನತೆಗೆ ಅರ್ಹವಾದ ಅತ್ಯಂತ ಸೂಕ್ತ ನಿರ್ಧಾರವನ್ನು ಕಾಂಗ್ರೆಸ್ ಮತ್ತು ಯುನೈಟೆಡ್ ಡೆಮಾಕ್ರಟಿಕ್ ಪ್ರ್ರಂಟ್ ತೆಗೆದುಕೊಂಡಿದೆ. ಪಾಲಕ್ಕಾಡ್ ಜನರು ವಡಗರ ಜನತೆಯ ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ಮನೋಭಾವವನ್ನು ಎತ್ತಿ ಹಿಡಿಯಲಿದ್ದಾರೆ ಎಂದು ಪಾಲಕ್ಕಾಡ್ ಯುಡಿಎಫ್ ಹೇಳಿದೆ. 

            ಮುರಳೀಧರನ್ ಜಾತ್ಯತೀತ ಹೋರಾಟ ನಡೆಸಲು ತ್ರಿಶೂರ್ ನಲ್ಲಿ ಕಣಕ್ಕಿಳಿದರು. ಆದರೆ ಪರಾಭವಗೊಂಡರು. ತಾನೂ ಸೇರಿದಂತೆ ಕೇರಳದ ಇತರ 19 ಅಭ್ಯರ್ಥಿಗಳೂ ಆ ನಿರ್ಧಾರದ ಲಾಭ ಪಡೆದಿದ್ದಾರೆ. ಚುನಾವಣಾ ಫಲಿತಾಂಶಗಳು ರಾಷ್ಟ್ರಮಟ್ಟದಲ್ಲಿ ಬಿಜೆಪಿಯ ದುರಹಂಕಾರಕ್ಕೆ ಹಿನ್ನಡೆಯಾಗಿ ಪರಿಣಮಿಸುತ್ತಿವೆ ಎಂದು ಶಾಫಿ ಹೇಳಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries