HEALTH TIPS

ಕೆಎಸ್ ಆರ್ ಟಿಸಿ ಚಾಲಕರಿಗೆ ಸೂಚನೆ ನೀಡಿದ ಸಚಿವ ಕೆ.ಬಿ.ಗಣೇಶ್ ಕುಮಾರ್

                 ತಿರುವನಂತಪುರಂ: ಸುರಕ್ಷಿತ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಕೆಎಸ್‍ಆರ್‍ಟಿಸಿ ಚಾಲಕರಿಗೆ ಸಾರಿಗೆ ಸಚಿವ ಕೆ.ಬಿ.ಗಣೇಶ್ ಕುಮಾರ್ ಸೂಚನೆ ನೀಡಿದ್ದಾರೆ.

                ಖಾಸಗಿ ಬಸ್‍ಗಳಿಗೆ ಪೈಪೋಟಿ ನೀಡಬಾರದು. ಆತುರ ಬೇಡ ಎಂದು ಸಚಿವರು ಹೇಳಿದರು.

                ಕೆಎಸ್‍ಆರ್‍ಟಿಸಿ ಸಾಮಾಜಿಕ ಜಾಲತಾಣ ಪುಟದ ಮೂಲಕ ಸಚಿವರ ಸೂಚನೆ ನೀಡಲಾಗಿದೆ. ನಾನು ನಿಮಗೆ ಹೇಳಲು ಒಂದು ವಿಷಯವಿದೆ ಎಂಬ ವಿಡಿಯೋದಲ್ಲಿ ಸಚಿವರು ಈ ಬಗ್ಗೆ ನಿರ್ದೇಶಿಸಿದ್ದಾರೆ. 

              ಪ್ರಯಾಣಿಕರಿಗೆ ಭಯ ಹುಟ್ಟಿಸುವ ರೀತಿಯಲ್ಲಿ ಬಸ್ ಓಡಿಸಬೇಡಿ, ದ್ವಿಚಕ್ರ ವಾಹನಗಳಿಗೆ ಪೈಪೋಟಿ ನೀಡಬೇಡಿ ಎಂದು ಚಾಲಕರಿಗೆ ಗಣೇಶ್ ಕುಮಾರ್ ಸೂಚಿಸಿದ್ದಾರೆ. ವೇಳಾಪಟ್ಟಿಯನ್ನು ಅನುಸರಿಸಲು ಜಾಗರೂಕರಾಗಿರಲು ಸೂಚಿಸಿರುವರು.

              ಬ್ರೀತ್ ಅಲೈಸರ್ ಪರೀಕ್ಷೆ ಆರಂಭವಾದ ನಂತರ ಕೆಎಸ್‍ಆರ್‍ಟಿಸಿಯಲ್ಲಿ ಅಪಘಾತಗಳು ಕಡಮೆಯಾಗಿವೆ. 

             ಡೀಸೆಲ್ ಉಳಿಸುವ ರೀತಿಯಲ್ಲಿ ಬಸ್ ಓಡಿಸಬೇಕು.ಮುಂದೆ ಬರುವ ಬಸ್‍ಗೆ ಸಮಾನಾಂತರವಾಗಿ ನಿಲ್ಲಿಸಬಾರದು.  ಕೈ ತೋರಿಸಿದಲ್ಲಿ ಬಸ್ ನಿಲ್ಲಲಿ ಎಂದು ಕೆ.ಬಿ.ಗಣೇಶ್ ಕುಮಾರ್ ಹೇಳಿದರು. ರಸ್ತೆಯ ಇತಿಮಿತಿಯನ್ನು ಪರಿಗಣಿಸಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸ್ಕೂಟರ್ ಪ್ರಯಾಣಿಕರನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಕೆಬಿ ಗಣೇಶ್ ಕುಮಾರ್ ವಿಡಿಯೋದಲ್ಲಿ ಹೇಳುತ್ತಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries