HEALTH TIPS

ಮಧುಮೇಹಿಗಳು ಸಕ್ಕರೆಯ ಬದಲು ಬೆಲ್ಲ ಮತ್ತು ಜೇನುತುಪ್ಪವನ್ನು ಬಳಸಬಹುದೇ?

                  ಬೆಲ್ಲವು ನೈಸರ್ಗಿಕ ಸಿಹಿಕಾರಕವಾಗಿದ್ದು, ಇದನ್ನು ಅನೇಕ ಜನರು ಸಕ್ಕರೆಗೆ ಪರ್ಯಾಯವಾಗಿ ಬಳಸುತ್ತಾರೆ. ಬೆಲ್ಲವು ರಕ್ತದೊತ್ತಡವನ್ನು ನಿಯಂತ್ರಿಸಲು, ರಕ್ತವನ್ನು ಶುದ್ಧೀಕರಿಸಲು, ಜೀರ್ಣಕ್ರಿಯೆಯನ್ನು ಸುಲಭಗೊಳಿಸಲು ಮತ್ತು ರಕ್ತಹೀನತೆಗೆ ಚಿಕಿತ್ಸೆ ನೀಡಲು ಒಳ್ಳೆಯದು.

                 ಆದರೆ ಮಧುಮೇಹ ರೋಗಿಗಳು ಇದನ್ನು ಸಕ್ಕರೆಗೆ ಬದಲಿಯಾಗಿ ಬಳಸಬಹುದು ಎಂದು ಹಲವರು ಅನುಮಾನಿಸುತ್ತಾರೆ. ಮಧುಮೇಹಿಗಳು ಕಡಮೆ ಗ್ಲೈಸೆಮಿಕ್ ಇಂಡೆಕ್ಸ್ ಇರುವ ಆಹಾರವನ್ನು ಸೇವಿಸಬೇಕು.

                  ಆದಾಗ್ಯೂ, ಬೆಲ್ಲದ ಗ್ಲೈಸೆಮಿಕ್ ಇಂಡೆಕ್ಸ್ ಮಟ್ಟವು ತುಂಬಾ ಹೆಚ್ಚಾಗಿದೆ. ಹಾಗಾಗಿ ಮಧುಮೇಹಿಗಳು ಆದಷ್ಟು ಅವುಗಳನ್ನು ತಪ್ಪಿಸುವುದು ಉತ್ತಮ. ಸಕ್ಕರೆಗಿಂತ ಉತ್ತಮವಾಗಿದ್ದರೂ, ಇವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಅಲ್ಲದೆ, ಜೇನುತುಪ್ಪವನ್ನು ಬಳಸಬಹುದೇ ಎಂದು ಹಲವರು ಅನುಮಾನಿಸುತ್ತಾರೆ. ಜೇನುತುಪ್ಪವು ೮೦ ಪ್ರತಿಶತ ನೈಸರ್ಗಿಕ ಸಕ್ಕರೆಗಳು, ೧೮ ಪ್ರತಿಶತ ನೀರು ಮತ್ತು ೨ ಪ್ರತಿಶತ ಖನಿಜಗಳು, ವಿಟಮಿನ್ಗಳು ಮತ್ತು ಪ್ರೊಟೀನ್ ಗಳನ್ನು ಹೊಂದಿರುತ್ತದೆ.

                    ಜೇನುತುಪ್ಪದ ನೈಸರ್ಗಿಕ ಘಟಕಗಳಲ್ಲಿ ಸುಮಾರು ೭೦ ಪ್ರತಿಶತವು ಪ್ರಕ್ಟೋಸ್ ಮತ್ತು ಗ್ಲೂಕೋಸ್ ಆಗಿದೆ. ಜೇನುತುಪ್ಪವು ಪ್ರಕ್ಟೋಸ್ (೪೦%), ಗ್ಲೂಕೋಸ್ (೩೦%), ನೀರು ಮತ್ತು ಖನಿಜಗಳಾದ ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್‌ಗಳಿಂದ ಕೂಡಿದೆ. ಅವು ಕ್ಯಾಲೊರಿಗಳನ್ನು ಸಹ ಹೊಂದಿರುತ್ತವೆ. ಜೇನುತುಪ್ಪದ ಗ್ಲೈಸೆಮಿಕ್ ಇಂಡೆಕ್ಸ್ ಮಟ್ಟವು ೬೦ ರಿಂದ ೬೫ ರಷ್ಟಿದೆ. ಆದ್ದರಿಂದ ಮಧುಮೇಹಿಗಳು ಜೇನು ತುಪ್ಪವನ್ನು ಅತಿಯಾಗಿ ಸೇವಿಸದಂತೆ ಎಚ್ಚರಿಕೆ ವಹಿಸಬೇಕು. ಹಾಗಾಗಿ ಮಧುಮೇಹಿಗಳು ಜೇನು ತುಪ್ಪವನ್ನು ಹೆಚ್ಚು ಸೇವಿಸಬಾರದು ಎನ್ನುತ್ತಾರೆ ತಜ್ಞರು.



Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries