HEALTH TIPS

ಜ್ವರದಿಂದ ಕಂಗೆಟ್ಟ ರಾಜ್ಯ: ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ: ಪ್ಯಾರಸಿಟಮಾಲ್ ಮಾತ್ರೆಗಳಷ್ಟೇ ಲಭ್ಯ ಔಷಧಿ

           ತ್ರಿಶೂರ್: ಮುಂಗಾರು ಆರಂಭವಾಗುವ ಮುನ್ನವೇ ಬೇಸಿಗೆಯ ಮಳೆಯ ಆರ್ಭಟಕ್ಕೆ ಇಡೀ ರಾಜ್ಯ ಜ್ವರದಿಂದ ಕಂಗೆಟ್ಟಿದ್ದರೂ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷÀಧಿ ಕೊರತೆಗೆ ಪರಿಹಾರ ಸಿಕ್ಕಿಲ್ಲ.

             ಜಿಲ್ಲೆಯ ವೈದ್ಯಕೀಯ ಕಾಲೇಜುಗಳಿಂದ ಹಿಡಿದು ಪ್ರಾಥಮಿಕ ಆರೋಗ್ಯ ಕೇಂದ್ರಗಳವರೆಗಿನ ಆಸ್ಪತ್ರೆಗಳಲ್ಲಿ ಆ್ಯಂಟಿಬಯೋಟಿಕ್ ಸೇರಿದಂತೆ ಅಗತ್ಯ ಔಷಧಿಗಳ ತೀವ್ರ ಕೊರತೆ ಇದೆ.

             ಜಿಲ್ಲೆಯಲ್ಲಿ ಡೆಂಗ್ಯೂ, ರೇಬಿಸ್ ರೋಗಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಜ್ವರ ವ್ಯಾಪಕವಾಗಿದ್ದರೂ, ಹಿಂದಿನ ಸೀಸನ್‍ನಂತೆ ಜ್ವರ ಚಿಕಿತ್ಸಾಲಯಗಳು ತೆರೆದಿಲ್ಲ.

          ಜ್ವರ ಪೀಡಿತರು ಸಾಮಾನ್ಯ ಒಪಿ ವಿಭಾಗಗಳು ಮತ್ತು ತುರ್ತು ವಿಭಾಗಗಳಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಆಸ್ಪತ್ರೆಗಳಲ್ಲಿ ಜ್ವರ ಪೀಡಿತರಿಗೆ ನೀಡಲು ಪ್ಯಾರಸಿಟಮಾಲ್ ಮಾತ್ರೆಗಳಿವೆ. ತೀವ್ರ ಕೆಮ್ಮು, ಉಬ್ಬಸ ಮತ್ತು ಶೀತಕ್ಕೆ ಯಾವುದೇ ಔಷಧಿಗಳಿಲ್ಲ.

           ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರಿಗೆ ಅಸ್ತಲಿನ್ ಮತ್ತು ಸಾಲ್ಬುಟಮಾಲ್ ಸಿರಪ್, ನೆಗಡಿ ಮತ್ತು ವಿವಿಧ ರೀತಿಯ ಅಲರ್ಜಿಗಳಿಗೆ ಸಿಟ್ರಿಸಿನ್, ಗ್ಯಾಸ್ ತಡೆಯುವ ಪ್ಯಾಂಡಕ್, ಗಾಯಗಳನ್ನು ಒಣಗಿಸುವ ಮುಲಾಮುಗಳು ಮತ್ತು ನೋವು ನಿವಾರಕ ಅಲ್ಟ್ರಾಸೆಟ್ ಸರ್ಕಾರಿ ಆಸ್ಪತ್ರೆಗಳ ಫಾರ್ಮಸಿಗಳಲ್ಲಿ ಲಭ್ಯವಿಲ್ಲ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries