ಕಾಸರಗೋಡು: ವಾಚನಾ ವಾರಾಚರಣೆ ಅಂಗವಾಗಿ ಜಿಲ್ಲಾ ವಾರ್ತಾ ಮತ್ತು ಮಾಹಿತಿ ಕಛೇರಿಯು ಯು.ಪಿ., ಹೈಸ್ಕೂಲ್ ಮತ್ತು ಹೈಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿಗಳಿಗೆ 'ಕಾಸರಗೋಡಿನ ಓದು' ಎಂಬ ವಾಚನಾ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸುತ್ತಿದೆ.
ಕಾಸರಗೋಡಿನ ಲೇಖಕರ ಬರಹಗಳನ್ನು ಟಿಪ್ಪಣಿಯಾಗಿಸಿಕೊಂಡು ಪ್ರಬಂಧ ರಚಿಸಬೇಕಾಗಿದೆ. ಮುಖ್ಯ ಶಿಕ್ಷಕರಿಂದ ದೃಢೀಕರಿಸಲ್ಪಟ್ಟ 300 ಪದಗಳಿಗಿಂತ ಕಡಿಮೆಯಿಲ್ಲದ ಪ್ರಬಂಧಗಳನ್ನು ಅಂಚೆ ಮೂಲಕ ಅಥವಾ ಖುದ್ದಾಗಿ ಜಿಲ್ಲಾ ಮಾಹಿತಿ ಕಛೇರಿ, ಕಾಸರಗೋಡು ವಿದ್ಯಾನಗರ ಸಿವಿಲ್ ಸ್ಟೇಷನ್ ನಲ್ಲಿ ಜೂನ್ 25 ರೊಳಗೆ ಲಭ್ಯವಾಗುವಂತೆ ತಲುಪಿಸಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ (04994 255145)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.