HEALTH TIPS

ಕುಟುಂಬಶ್ರೀ ರಾಜ್ಯ ಸರ್ಗೋತ್ಸವ ಸಮಾರೋಪ: ಮುಟ್ಟಿದ್ದೆಲ್ಲ ಚಿನ್ನವಾಗಿಸುವ ಶಕ್ತಿ ಸ್ತ್ರೀಶಕ್ತಿಗಿದೆ: ಸಚಿವ ಎಂ.ಬಿ.ರಾಜೇಶ್

               ಕಾಸರಗೋಡು: ಎಲ್ಲ ಕ್ಷೇತ್ರಗಳಲ್ಲಿ ಮಹಿಳಾ ಸಬಲೀಕರಣ ಸಾಧ್ಯವಾದ ಆಂದೋಲನವೇ ಕುಟುಂಬಶ್ರೀ ಎಂದು ರಾಜ್ಯ ಸ್ಥಳೀಯಾಡಳಿತ ಸಚಿವ ಎಂ.ಬಿ.ರಾಜೇಶ್ ಹೇಳಿದರು.

                  ಕಾಲಿಕ್ಕಡವು ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ರಾಜ್ಯಮಟ್ಟದ ಕುಟುಂಬಶ್ರೀ ಸರ್ಗೋತ್ಸವ ಸಮಾರಂಭದ ಅಂಗವಾಗಿ ಭಾನುವಾರ ನಡೆದ ಸಮಾರೋಪ ಹಾಗೂ ಬಹುಮಾನ ವಿತರಣೆಯನ್ನು ಆನ್ ಲೈನ್ ವೇದಿಕೆಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

                ಮುಟ್ಟಿದ್ದನ್ನೆಲ್ಲಾ ಚಿನ್ನವನ್ನಾಗಿಸುವ ಸಾಮಥ್ರ್ಯ ಸ್ತ್ರೀಶಕ್ತಿಗಿದೆ. ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕøತಿಕ ಔನ್ನತ್ಯವನ್ನು ಸಾಧಿಸಲು ರಂಗ ಸರ್ಗೋತ್ಸವ ಪರಿಣಾಮಕಾರಿ ಎಂದು ಸಚಿವರು ತಿಳಿಸಿದರು.


                 ಶಾಸಕ ಎಂ ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್, ಕುಟುಂಬಶ್ರೀ ಮಿಷನ್ ರಾಜ್ಯ ಆಡಳಿತ ಮಂಡಳಿ ಸದಸ್ಯೆ ಹಾಗೂ ಕಣ್ಣೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಪಿ.ದಿವ್ಯಾ, ಕುಟುಂಬಶ್ರೀ ಆಡಳಿತ ಮಂಡಳಿ ಸದಸ್ಯ ಪಿ.ಕೆ.ಸೈನಬಾ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.

                   ಕಾಸರಗೋಡು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಸ್ ಪಾದೂರು, ಪಿಲಿಕ್ಕೋಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ಪಿ.ಪ್ರಸನ್ನಕುಮಾರಿ, ಚೆರುವತ್ತೂರು ಗ್ರಾ.ಪಂ.ಅಧ್ಯಕ್ಷೆ ಸಿ.ವಿ.ಪ್ರತಿಲಾ, ಪಡನ್ನ ಗ್ರಾ.ಪಂ.ಅಧ್ಯಕ್ಷ ಪಿ.ವಿ.ಮುಹಮ್ಮದ್ ಅಸ್ಲಂ, ವಲಿಯಪರಂಬ ಗ್ರಾ.ಪಂ.ಅಧ್ಯಕ್ಷ ವಿ.ವಿ.ಸಜೀವನ್, ತೃಕರಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ಕೆ.ಬಾವ, ಕೈಯೂರು-ಚಿಮೇನಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಎಂ. ಶಾಂತಾ, ಜಿಲ್ಲಾ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ. ಶಕುಂತಲಾ, ಎಂ. ಮನು, ಜಿಲ್ಲಾ ಪಂಚಾಯತಿ ಸದಸ್ಯ ಸಿ.ಜೆ.ಸಜಿತ್, ನೀಲೇಶ್ವರ ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷೆ ಪಿ. ಕೆ ಲಕ್ಷ್ಮಿ, ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕ ಸುರೇಂದ್ರನ್ ಟಿ.ಟಿ., ಉದುಮ ಗ್ರಾ.ಪಂ.ಅಧ್ಯಕ್ಷ ಸಿ.ಎಸ್. ಅಧ್ಯಕ್ಷೆ ಕೆ ಸನುಜಾ, ಕೋಡೋಂಬೆಳ್ಳೂರು ಸಿ.ಡಿ.ಎಸ್.ಅಧ್ಯಕ್ಷೆ ಸಿ.ಬಿಂದು, ಬಂದಡ್ಕ ಸಿ. ಡಿ ಎಸ್ ಅಧ್ಯಕ್ಷೆ ಎಂ. ಗುಲಾಬಿ, ಚೆಮ್ಮನಾಡ್ ಸಿಡಿಎಸ್ ಅಧ್ಯಕ್ಷೆ ಮುಮ್ತಾಝ್ ಅಬೂಬಕರ್, ವರ್ಕಾಡಿ ಸಿಡಿಎಸ್ ಅಧ್ಯಕ್ಷೆ ವಿಜಯಲಕ್ಷ್ಮಿ ಉಪಸ್ಥಿತರಿದ್ದು ಮಾತನಾಡಿದರು.

           ಕುಟುಂಬಶ್ರೀ ರಾಜ್ಯ ಕಾರ್ಯನಿರ್ವಾಹಕ ನಿರ್ದೇಶಕ ಜಾಫರ್ ಮಲಿಕ್ ಸ್ವಾಗತಿಸಿ, ಎಡಿಎಂಸಿ ಸಿ.ಎಚ್.ಇಕ್ಬಾಲ್ ವಂದಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries