ಕಾಸರಗೋಡು: ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಾಚನ ಸಪ್ತಾಹ ಮತ್ತು ಫಿಲ್ಮ್ ಕ್ಲಬ್ ನಿರ್ಮಾಣದ ಸಮಾರೋಪ ಸಮಾರಂಭ ಮಂಗಳವಾರ ಶಾಲೆಯಲ್ಲಿ ಜರುಗಿತು. ಚಿತ್ರನಟ ಪಿ. ಪಿ. ಕುಞÂಕೃಷ್ಣನ್ ಮಾಸ್ಟರ್ ಸಮಾರಂಭ ಉದ್ಘಾಟಿಸಿದರು. ಶಾಲಾ ರಕ್ಷಕ ಶೀಕ್ಷಕ ಸಂಘದ ಅಧ್ಯಕ್ಷ ರಶೀದ್ ಪೂರಣಂ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಿಬ್ಬಂದಿ ಕಾರ್ಯದರ್ಶಿ ಎ. ಶ್ರೀಕುಮಾರ್ ಚಟುವಟಿಕೆ ವರದಿ ಮಂಡಿಸಿದರು.
ಈ ಸಂದರ್ಭ ಮಾತೃಭಾಷಾ ಸಂವರ್ಧನಾ ಕಾರ್ಯಕ್ರಮ'ಜೇನ್ನುಡಿ'ಯನ್ನು ಎಸ್ಎಸ್ಕೆ ಕಾರ್ಯಕ್ರಮಾಧಿಕಾರಿ ಟಿ. ಪ್ರಕಾಶನ ಉದ್ಘಾಟಿಸಿದರು. ಕಾಸರಗೋಡು ನಗರಸಭಾ ಸದಸ್ಯೆ ಕೆ. ಶ್ರೀಲತಾ ಟೀಚರ್, ಎಸ್ಎಂಸಿ ಅಧ್ಯಕ್ಷ ಕೆ. ಸಿ. ಲೈಜುಮೋನ್, ಎಸ್ಆರ್ಜಿ ಸಂಚಾಲಕ ಬಿ. ರೋಶನಿ, ಎ. ಸುರೇಖಾ, ಸರ್ವಮಂಗಳ ರಾವ್ ಹಾಗೂ ಶಾಲಾ ಪ್ರತಿನಿಧಿ ಸಮೃದ್ಧಿ ಆಳ್ವ ªಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ವಿಮಲಾ ಕುಮಾರಿ ಸ್ವಾಗತಿಸಿದರು. ವಿದ್ಯಾರಂಗದ ಸಂಯೋಜಕಿ ಸಿಂಧು ಕಿಯಕ್ಕಿನಿಯಿಲ್ ವಂದಿಸಿದರು.