HEALTH TIPS

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ-ಕೊವ್ವಲ್‍ನಲ್ಲಿ ಸಂಚಾರ ನಿಯಂತ್ರಣ

                ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಷಟ್ಪಥ ಕಾಮಗಾರಿಯನ್ವಯ ಚೆರುವತ್ತೂರು ಗ್ರಾಮದ ಕೊವ್ವಲ್ ಜಂಕ್ಷನ್ ಬಳಿ ಚರಂಡಿ ನಿರ್ಮಾಣ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜೂನ್ 12ರ ಬೆಳಗ್ಗೆ 10ರಿಂದ 13ರ ಬೆಳಗ್ಗೆ 6ರವರೆಗೆ ವಾಹನಗಳ ಸಂಚಾರಕ್ಕೆ ನಿಯಂತ್ರಣ ಹೇರಲಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ತಿಳಿಸಿದ್ದಾರೆ.

                ಈ ದಿವಸಗಳಲ್ಲಿ ಬಸ್ಸುಗಳು ಮತ್ತು ಸಣ್ಣ ವಾಹನಗಳು ನೀಲೇಶ್ವರಂ-ಕೊಟ್ಟಪುರಂ ರಸ್ತೆಯ ಮೂಲಕ ಸುತ್ತುಬಳಸಿ ಸಮಚರಿಸಬೇಕಾಗಿದೆ. ಕಾಮಗಾರಿ ಪಊರ್ತಿಗೊಳ್ಳುವ ವರೆಗೆ   ದಕ್ಷಿಣದಲ್ಲಿ ಕಾಳಿಕಡವು ಮತ್ತು ಉತ್ತರ ಭಾಗದಲ್ಲಿ ಪಡನ್ನಕ್ಕಾಡ್ ಪ್ರದೇಶದಲ್ಲಿ ದೊಡ್ಡ ವಾಹನಗಳನ್ನು ತಡೆದು ನಿಲ್ಲಿಸಬೇಕು. ಈ ಬಗ್ಗೆ ಪೆÇಲೀಸ್ ಹಾಗೂ ಮೋಟಾರು ವಾಹನ ಇಲಾಖೆಗೆ ವ್ಯವಸ್ಥೆ ಮಾಡುವಂತೆ ಹಾಗೂ ಒಳಚರಂಡಿ ಕೆಲಸದ ಕಾಮಗಾರಿಯನ್ನು ಒಪ್ಪಂದದಂತೆ ಕಂಪನಿಯು ಸಕಾಲದಲ್ಲಿ ಪೂರ್ತಿಗೊಳಿಸಿ ನೀಡುವಂತೆಯೂ ಜಿಲ್ಲಾಧಿಕಾರಿ  ಸೂಚಿಸಿದ್ದಾರೆ. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries