HEALTH TIPS

ಕಾರ್ಯ ನಿರ್ವಹಣೆಯಲ್ಲಿ ವಿಫಲತೆ: ತ್ರಿಶೂರ್ ನಗರ ಪೋಲೀಸ್ ಆಯುಕ್ತ ಅಂಕಿತ್ ಅಶೋಕ ರ ವರ್ಗಾವಣೆ

               ತ್ರಿಶೂರ್: ತ್ರಿಶೂರ್ ಪೂರಂ ನಿರ್ವಹಣೆಯಲ್ಲಿ ವಿಫಲ ಆರೋಪ ಎದುರಿಸುತ್ತಿದ್ದ ನಗರ ಪೆÇಲೀಸ್ ಆಯುಕ್ತ ಅಂಕಿತ್ ಅಶೋಕ ಅವರನ್ನು ತ್ರಿಶೂರ್ ನಗರ ಪೋಲೀಸ್ ಕಮಿಷನರ್ ಪದವಿಯಿಂದ ವರ್ಗಾವಣೆ ಮಾಡಲಾಗಿದೆ.

                ಅಂಕಿತ್ ಅಶೋಕ್‍ಗೆ ಹೊಸ ನೇಮಕಾತಿಯಾಗಿಲ್ಲ. ಪೋಲೀಸರ ಅನಗತ್ಯ ನಿರ್ಬಂಧಗಳಿಂದ ತ್ರಿಶೂರ್ ಪೂರಂ ಬಿಕ್ಕಟ್ಟಿಗೆ ಸಿಲುಕಿದೆ ಎಂಬ ಟೀಕೆ ವ್ಯಕ್ತವಾಗಿದೆ. ತ್ರಿಶೂರ್ ಪೂರಂನಲ್ಲಿ ಕಮಿಷನರ್ ತೆಗೆದುಕೊಂಡ ಕ್ರಮಗಳು ಬಹಳ ವಿವಾದಾತ್ಮಕವಾಗಿದ್ದವು.

               ಆನೆಗಳಿಗೆ ವಸ್ತ್ರ ಸಮರ್ಪಿಸುವವರನ್ನು, ಕೊಡೆ ಬದಲಿಸಲು ಕೊಡೆ ತರುವವರನ್ನು ಪೋಲೀಸರು ತಡೆದಿರುವ ದೃಶ್ಯಾವಳಿಗಳು ಹೊರಬಿದ್ದಿದ್ದವು. ತಿರುವಂಬಾಡಿಯ ಕೊಡೆ ವಿನಿಮಯಕ್ಕೆ ಶ್ರೀರಾಮನ ಕೊಡೆ ತಂದವರನ್ನೂ ಪೋಲೀಸರು ತಡೆದಿದ್ದರು. ಆದರೆ ಹಲವರು ನಿಶಾನೆ, ಕೊಡೆ ಹಿಡಿದು ಒಳ ಪ್ರವೇಶಿಸಲು ಯತ್ನಿಸಿದ್ದೇ ಅದನ್ನು ನಿಲ್ಲಿಸಲು ಕಾರಣ ಎಂದು ಆಯುಕ್ತರು ವಿವರಣೆ ನೀಡಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries