HEALTH TIPS

ಮಥುರಾ: ದೇವಾಲಯದ ಮೆಟ್ಟಿಲಿನ ಬಳಿ ಮಾಂಸಾಹಾರ ಬೇಯಿಸಿದ ವ್ಯಕ್ತಿ ಬಂಧನ

Top Post Ad

Click to join Samarasasudhi Official Whatsapp Group

Qries

            ಥುರಾ: ಮಥುರಾದ ಬರ್ಸಾನಾ ಪ್ರದೇಶದಲ್ಲಿರುವ ಲಾಡ್ಲಿ ದೇವಾಲಯದ (ರಾಧಾ ರಾಣಿ ದೇವಾಲಯ) ಮೆಟ್ಟಿಲುಗಳ ಬಳಿ ಮಾಂಸಾಹಾರ ಬೇಯಿಸುತ್ತಿದ್ದ ವ್ಯಕ್ತಿಯನ್ನು ಭಕ್ತರು ತಳಿಸಿದ್ದು, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

           'ಸಂಜಯ್‌ ಎನ್ನುವಾತ ಬಂಧಿತ ವ್ಯಕ್ತಿ. ಈತ ರಾಜಸ್ಥಾನ ಮೂಲದವನು.

ಕಳೆದ ಕೆಲವು ವರ್ಷಗಳಿಂದ ದೇವಾಲಯದ ಆವರಣದಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ. ಪೂಜಾಸ್ಥಳ ಅಪವಿತ್ರಗೊಳಿಸಿದ ಆರೋಪದ ಮೇಲೆ ಆತನನ್ನು ಬಂಧಿಸಲಾಗಿದೆ' ಎಂದು ಪೊಲೀಸರು ತಿಳಿಸಿದ್ದಾರೆ.

                ಗುರುವಾರ ಸಂಜೆ ದೇಗುಲದ ಮೆಟ್ಟಿಲುಗಳ ಬಳಿ ಮಾಂಸಾಹಾರ ಬೇಯಿಸುತ್ತಿದ್ದ ಎಂದು ಸಂಜಯ್‌ಗೆ ಸ್ಥಳದಲ್ಲಿದ್ದ ಕೆಲವು ಭಕ್ತರು ಥಳಿಸಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದು, ಆತನನ್ನು ಬಂಧಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries