HEALTH TIPS

ಕೊಂಡೆವೂರು ವಿದ್ಯಾಪೀಠದಲ್ಲಿ ವಿಶ್ವ ಪರಿಸರ ದಿನಾಚರಣೆ

                    ಉಪ್ಪಳ :  ಕೊಂಡೆವೂರು ಶ್ರೀ ನಿತ್ಯಾನಂದ ವಿದ್ಯಾಪೀಠದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಶಾಲಾಸಂಸ್ಥಾಪಕ  ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿ ದಿನದ ಮಹತ್ಚವನ್ನು ತಿಳಿಸಿ, ವಿದ್ಯಾರ್ಥಿಗಳು ಪ್ರತಿದಿನವನ್ನು ಪರಿಸರ ದಿನವಾಗಿ ಆಚರಿಸಿದರೆ ಮಾತ್ರ ಮುಂದಿನ ಪೀಳಿಗೆಗಾಗಿ ನಮ್ಮ ಭೂಮಿಯನ್ನು ಕಾಪಿಡಬಹುದಾಗಿದೆ. ದಿನೇ ದಿನೇ ಹೆಚ್ಚುತ್ತಿರುವ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಮಾಡುವುದರ ಜೊತೆಗೆ ಬಳಸಿದ ಕಾಗದಗಳನ್ನು ಪುನರ್ಬಳಕೆ ಮಾಡಲು ಪ್ರಯತ್ನಿಸಿದರೆ ಮಾತ್ರ ಮುಂದಿನ ತಲೆಮಾರು ಪ್ರಕೃತಿಯನ್ನು ಬಳಕೆಮಾಡಲು ಸಾಧ್ಯ ಎಂದು ತಿಳಿಸಿದರು.


             ಪೂಜ್ಯ ಶ್ರೀಗಳ ದಿವ್ಯ ಹಸ್ತದಲ್ಲಿ ವಿತರಿಸಿದ ಮಾವಿನ ಬೀಜವನ್ನು ವಿದ್ಯಾರ್ಥಿಗಳು ಬಿತ್ತನೆ ಮಾಡಿದರು.ಶಾಲಾ ವಿದ್ಯಾರ್ಥಿ ಚಿನ್ಮಯ್ ಪರಿಸರ ದಿನದ ಕುರಿತು ಭಾಷಣಗೈದರು. ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಸಮಿತಿಯ ಶೈಕ್ಷಣಿಕ ಪ್ರಮುಖ ಸುಧಾಕರ್ ಯನ್, ಶಾಲಾ ಆಡಳಿತಾಧಿಕಾರಿ ಕಮಾಲಕ್ಷ ಎಮ್ ಉಪಸ್ಥಿತರಿದ್ದರು. ಪ್ರಾಂಶುಪಾಲೆ ರೇಖಾ ಪ್ರದೀಪ್ ಅವರು ಪರಿಸರ ದಿನದ ಮಹತ್ವವನ್ನು ತಿಳಿಸಿದರು. ಶಿಕ್ಷಕಿ ಕುಮಾರಿ ಚೈತನ್ಯ ಸ್ವಾಗತಿಸಿ, ಅಶ್ವಿತ ವಂದಿಸಿದರು. ಸೌಮ್ಯ ಕಾರ್ಯಕ್ರಮದ ನಿರೂಪಿಸಿದರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries