HEALTH TIPS

ಒತ್ತಡದಲ್ಲಿ ರಾಜ್ಯದ ಪೋಲೀಸ್ ಪಡೆ: ಆರು ದಿನಗಳಲ್ಲಿ ಐವರು ಪೋಲೀಸರು ಆತ್ಮಹತ್ಯೆ

              ತಿರುವನಂತಪುರಂ: ರಾಜ್ಯದ ಪೋಲೀಸ್ ಇಲಾಖೆಯಲ್ಲಿ ಆತ್ಮಹತ್ಯೆ ಪ್ರಕರಣಗಳು ಆಗಾಗ ಸುದ್ದಿಯಾಗುತ್ತಿವೆ. ಕಳೆದ ಆರು ದಿನಗಳಲ್ಲಿ ಕೇರಳದ ಐವರು ಪೋಲೀಸ್ ಅಧಿಕಾರಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.

             ತಿರುವನಂತಪುರಂ ಪೋಲೀಸ್ ಠಾಣೆಯ ಎಸ್‍ಐ ಕುರುವಿಳ ಜಾರ್ಜ್ (45) ಎಂಬವರು ಆತ್ಮಹತ್ಯೆ ಮಾಡಿಕೊಂಡ ಇತ್ತೀಚಿನ ಪೋಲೀಸ್.

           ಅವರು ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ಕೊಟ್ಟಾಯಂನ ಕಂಜಿಕುಝಿಯಲ್ಲಿರುವ ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪೋಲೀಸರ ಮಾನಸಿಕ ಒತ್ತಡವೇ ಆತ್ಮಹತ್ಯೆಗೆ ಕಾರಣ ಎಂಬುದನ್ನು ಅಧಿಕಾರಿಗಳು ಈಗಾಗಲೇ ಪತ್ತೆ ಹಚ್ಚಿದ್ದರು. ಅತಿಯಾದ ಕೆಲಸದ ಹೊರೆ, ಮೇಲಧಿಕಾರಿಗಳ ಒತ್ತಡ ಹಾಗೂ ಕೌಟುಂಬಿಕ ಸಮಸ್ಯೆಗಳು ಪೋಲೀಸರನ್ನು ಆತ್ಮಹತ್ಯೆಗೆ ಶರಣಾಗುವಂತೆ ಮಾಡುತ್ತಿವೆ.

             ನಾಲ್ಕು ವರ್ಷಗಳಲ್ಲಿ ಕೇರಳ ಪೋಲೀಸ್ ಒಂದರಲ್ಲೇ ಸುಮಾರು 75 ಆತ್ಮಹತ್ಯೆಗಳು ಸಂಭವಿಸಿವೆ. ಒತ್ತಡಗಳಿಂದಾಗಿ ಆತ್ಮಹತ್ಯೆಗೆ ಶರಣಾಗುವವರ ಸಂಖ್ಯೆ ಹೆಚ್ಚುತ್ತಿದೆ. ಡಿವೈಎಸ್ಪಿ, ಸಿಐ, ಎಸ್‍ಐ ಸೇರಿದಂತೆ ಮಹಿಳಾ ಅಧಿಕಾರಿಗಳೂ ಪ್ರಾಣ ತೆತ್ತಿದ್ದಾರೆ. ಪೋಲೀಸ್ ನಾಯಕತ್ವವು ಕೆಲಸದ ಹೊರೆ, ವಿಶ್ರಾಂತಿ ಕೊರತೆ ಮತ್ತು ಕೆಲಸದಲ್ಲಿನ ತೊಡಕುಗಳಿಗೆ ಕಾರಣಗಳನ್ನು ಕಂಡುಕೊಂಡಿದೆ.

           ಜಾಗೃತಿ ಮೂಡಿಸುವುದು, ಸಭೆಗಳು ಮತ್ತು ಸಮಾಲೋಚನೆಗಳು ಯಶಸ್ವಿಯಾಗಲಿಲ್ಲ, ಖಿನ್ನತೆಯಿಂದ ಹೆಚ್ಚಿನ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತೀವ್ರ ಒತ್ತಡದಿಂದಾಗಿ ಪೋಲೀಸರು ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. 200ಕ್ಕೂ ಹೆಚ್ಚು ಪೋಲೀಸರು ಖಾಕಿಯಿಂದ ನಿವೃತ್ತಿಗಾಗಿ ಅನುಮತಿ ಕೋರಿರುವರೆಂದು ವರದಿ ತಿಳಿಸಿದೆ. 

            ಇಡುಕ್ಕಿ ವಂದನ್‍ಮೇಡು ಪೋಲೀಸ್ ಠಾಣೆಯ ಸಿಪಿಒ, ಆಲಪ್ಪುಳ ಕೈಂಕಾರಿ ಮೂಲದ ಎಜಿ ರತೀಶ್ ಕುಮಳಿಯ ಖಾಸಗಿ ಹೋಟೆಲ್‍ನಲ್ಲಿ ಶವವಾಗಿ ಬುಧವಾರ ಆತ್ಮಹತ್ಯೆಗೈದಿದ್ದರು. ಎರ್ನಾಕುಳಂ ಇನ್ಫೋಪಾರ್ಕ್ ಪೋಲೀಸ್ ಠಾಣೆಯ ಸಿಪಿಒ ಮಧು (48), ಪತ್ತನಂತಿಟ್ಟ ಜಿಲ್ಲಾ ಸಿವಿಲ್ ಪೋಲೀಸ್ ಅಧಿಕಾರಿ ಪಿ.ಸಿ.ಅನೀಶ್,  ತ್ರಿಶೂರ್ ಪೋಲೀಸ್ ಅಕಾಡೆಮಿಯಲ್ಲಿ ಪತ್ತೆಯಾದ ಪೋಲೀಸ್ ಅಕಾಡೆಮಿಯ ತರಬೇತುದಾರ ಎಸ್‍ಐ ಜಿಮ್ಮಿ ಜಾರ್ಜ್ (35) ಇತ್ತೀಚೆಗೆ ಪೋಲೀಸ್ ಪಡೆಯಲ್ಲಿ ಪ್ರಾಣ ಕಳೆದುಕೊಂಡವರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries