ಮುಳ್ಳೇರಿಯ: ಬೋವಿಕ್ಕಾನ ಬೆಳ್ಳಿಪ್ಪಾಡಿ ಮಧುವಾಹಿನಿ ಗ್ರಂಥಾಲಯ ಎಸ್.ಎಸ್.ಎಲ್.ಸಿ. ಹಾಗು ಪ್ಲಸ್ ಟು ನಲ್ಲಿ ಉನ್ನತ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಕಾರ್ಯಕ್ರಮ ಜರಗಿತು. ಕಾರ್ಯಕ್ರಮವನ್ನು ರಾಷ್ಟ್ರಪತಿ ಸುವರ್ಣ ಪದಕ ಪಡೆದ ಸೂರಜ್ ಮುಂಡಕೈ ಉದ್ಘಾಟಿಸಿದರು. ಸಿ.ಕೆ.ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದರು. ಸಾಹಿತಿ ಬಿಂದು ಟೀಚರ್, ಪಿ.ಚೆರಿಯೋನ್, ಕೆ.ಜಯಚಂದ್ರನ್, ಪಿ.ಜ್ಯೋತಿ ಸೂರ್ಯನ್, ಶ್ರೀಜ ಬಳ್ಳಮೂಲೆ, ಸುಜಿತ ಚರವು, ಶೋಭ ಚರವು ಶುಭಹಾರೈಸಿದರು. ಕಾರ್ಯದರ್ಶಿ ರಾಘವನ್ ಬೆಳ್ಳಿಪ್ಪಾಡಿ ಸ್ವಾಗತಿಸಿ, ರಾಜೇಶ್ ಪಿ.ಜಿ. ವಂದಿಸಿದರು.