HEALTH TIPS

ಲೋಕಸಭಾ ಚುನಾವಣಾ ಮತ ಎಣಿಕೆ: ಕ್ಯೂಆರ್ ಕೋಡ್ ಇರುವ ಗುರುತಿನ ಚೀಟಿಯ ವಿತರಣಾ ಉದ್ಘಾಟಣೆ

               ಕಾಸರಗೋಡು : ಲೋಕಸಭಾ ಕ್ಷೇತ್ರದ ಮತ ಎಣಿಕೆ ದಿನವಾದ ಜೂ.4ರಂದು ಮತ ಎಣಿಕೆ ಕೇಂದ್ರ (ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ, ಪೆರಿಯ) ಪ್ರವೇಶಿಸಲು ಸಿಬ್ಬಂದಿ, ಮತ ಎಣಿಕೆ ಏಜೆಂಟರು ಸೇರಿದಂತೆ 2200ಕ್ಕೂ ಹೆಚ್ಚು ಮಂದಿಗೆ ವಿತರಿಸಲಿರುವ ಕ್ಯೂಆರ್ ಕೋಡ್ ಇರುವ ಗುರುತಿನ ಚೀಟಿಯ ವಿತರಣಾ ಉದ್ಘಾಟನೆ ಸರ್ಕಾರಿ ಕಾಲೇಜಿನಲ್ಲಿ ನಡೆದ ಅಂತಿಮ ಹಂತದ ತರಬೇತಿ ಕಾರ್ಯಕ್ರಮದಲ್ಲಿ ನಡೆಯಿತು. 

            ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಗುರುತಿನ ಚೀಟಿ ವಿತರಿಸುವ ಮೂಲಕ ಉದ್ಘಾಟಿಸಿದರುರೀ ಸಂದರ್ಭ ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹಮದ್ ಅವರು  ಜಿಲ್ಲಾಧಿಕಾರಿ ಇನ್ಬಾಶೇಖರ್ ಅವರಿಗೆ ಗುರುತಿನ ಚೀಟಿ ಹಸ್ತಾಂತರಿಸಿದರು. ಕ್ಯೂಆರ್ ಕೋಡ್ ಇರುವ ಐಡಿ ಕಾರ್ಡ್ ಮೂಲಕ ನೇರವಾಗಿ ಮತ ಎಣಿಕೆ ಕೇಂದ್ರಕ್ಕೆ ಆಗಮಿಸುವವರ ನಿಖರ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries