HEALTH TIPS

ಸ್ವರ್ಗದ ಎಂ.ಕೆ ಬಾಲಕೃಷ್ಣ ಗ್ರಂಥಾಲಯದಲ್ಲಿ ವಾಚನಾ ಸಪ್ತಾಹ ಕೃತಿ ಪರಿಚಯ - ಸನ್ಮಾನ ಕಾರ್ಯಕ್ರಮ


                   ಪೆರ್ಲ : ಸ್ವರ್ಗದ ಎಂ.ಕೆ ಬಾಲಕೃಷ್ಣ ಗ್ರಂಥಾಲಯ ಮತ್ತು ವಾಚನಾಲಯದಲ್ಲಿ ವಾಚನಾ ಸಪ್ತಾಹದ ಅಂಗವಾಗಿ ಪುಸ್ತಕ ಪರಿಚಯ ಕಾರ್ಯಕ್ರಮ ನಡೆಯಿತು.ಸಭೆಯ ಅಧ್ಯಕ್ಷತೆಯನ್ನು ಗ್ರಂಥಾಲಯದ ಅಧ್ಯಕ್ಷರಾದ ರವಿರಾಜ್ ಎಸ್ ವಹಿಸಿದರು.ಕಾರ್ಯಕ್ರಮವನ್ನು ಎಣ್ಮಕಜೆ ಗ್ರಾಮ ಪಂಚಾಯತು ಸದಸ್ಯರೂ,ತಾಲೂಕು ಲೈಬ್ರೆರಿ ಕೌನ್ಸಿಲ್ ಸದಸ್ಯರಾದ ರಾಮಚಂದ್ರ ಎಂ ಉದ್ಘಾಟಿಸಿದರು. 
               ಮುಖ್ಯ ಅತಿಥಿಯಾಗಿ ಪ್ರಸಿದ್ದ ಸಾಹಿತಿ ಶ್ರೀಮತಿ ರಾಜಶ್ರೀ ಟಿ ರೈ ಪೆರ್ಲ ಭಾಗವಹಿಸಿದರು.ಪುಸ್ತಕ ಪರಿಚಯ ಭಾಗವಾಗಿ ಶ್ರೀಮತಿ ರಾಜಶ್ರೀ ಟಿ ರೈ ಅವರ ತುಳು ಕಾದಂಬರಿ ಮುಸ್ರಾಲೊ ಪಟ್ಟೊ ಇದರ ಬಗ್ಗೆ ಕವಿ ರಿತೇಶ್ ಕಿರಣ್ ಕೃತಿ ಪರಿಚಯ ನಡೆಸಿ ಅಭಿಪ್ರಾಯಗಳನ್ನು ಮಂಡಿಸಿದರು.ಸಭೆಯಲ್ಲಿ ಶ್ರೀನಿವಾಸ ಪೆರಿಕ್ಕಾನ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಲೇಖಕಿ ಶ್ರೀಮತಿ ರಾಜಶೀ ಟಿ ರೈ ಅವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.ಗ್ರಂಥಾಲಯ ಕಾರ್ಯದರ್ಶಿ ರವಿ ವಾಣೀನಗರ ಸ್ವಾಗತಿಸಿ,ಉಪಾಧ್ಯಕ್ಷೆ ಚಂದ್ರಾವತಿ ಎಂ ವಂದಿಸಿದರು.

   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries