HEALTH TIPS

ಖಾಲಿಸ್ತಾನಿ ಹೋರಾಟಗಾರರ ವಿಮಾನ ಯಾನ ನಿರ್ಬಂಧ: ಆದೇಶ ಎತ್ತಿಹಿಡಿದ ಕೆನಡಾ ಕೋರ್ಟ್

        ಟ್ಟಾವಾ: ಇಬ್ಬರು ಖಾಲಿಸ್ತಾನಿ ಮೂಲಭೂತವಾದಿಗಳ ವಿಮಾನಯಾನಕ್ಕೆ ಹೇರಿದ್ದ ನಿರ್ಬಂಧ ಸಡಿಲಿಸಲು ಕೆನಡಾದ ಕೋರ್ಟ್‌ ನಿರಾಕರಿಸಿದೆ.

        ಭಗತ್‌ ಸಿಂಗ್ ಬ್ರಾರ್ ಮತ್ತು ಪರ್ವ್‌ಕರ್ ಸಿಂಗ್ ದುಲೈ ಅವರು ಸಲ್ಲಿಸಿದ್ದ ಮನವಿಯನ್ನು ಕೆನಡಾದ ಫೆಡರಲ್‌ ಕೋರ್ಟ್ ಕಳೆದ ವಾರ ವಜಾ ಮಾಡಿದೆ.

         ಈ ಇಬ್ಬರಿಗೂ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟರೆ, ಭಯೋತ್ಪಾದನೆ ಆದೀತೆಂಬ ಆತಂಕಕ್ಕೆ ಸಕಾರಣವಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

           ಕೆನಡಾದ ವಿಮಾನಯಾನ ಭದ್ರತಾ ಕಾಯ್ದೆಯಡಿ ಇವರ ಪ್ರಯಾಣಕ್ಕೆ ನಿರ್ಬಂಧ ಹೇರಲಾಗಿತ್ತು ಎಂದು ಕೆನಡಾದ ಸುದ್ದಿ ಸಂಸ್ಥೆ ಗುರುವಾರ ವರದಿ ಮಾಡಿದೆ.

              ಈ ಇಬ್ಬರೂ ವ್ಯಾಂಕೋವರ್‌ನಿಂದ ಪ್ರಯಾಣಿಸಲು 2018ರಲ್ಲಿ ಅನುಮತಿ ನಿರಾಕರಿಸಲಾಗಿತ್ತು. 2019ರಲ್ಲಿ ಈ ಇಬ್ಬರೂ ಫೆಡರಲ್‌ ಕೋರ್ಟ್‌ ಮೆಟ್ಟಿಲೇರಿದ್ದರು. ಇವರ ವಿರುದ್ಧವಾಗಿ ನ್ಯಾಯಮೂರ್ತಿ ಸೈಮನ್‌ ನೋಯೆಲ್ 2022ರಲ್ಲಿ ಆದೇಶ ನೀಡಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries