HEALTH TIPS

ಪುರಿ ದೇಗುಲ: ಫೋಕಸ್ ಲೈಟ್‌ ನಾಪತ್ತೆ

              ಭುವನೇಶ್ವರ: ಶ್ರೀ ಜಗನ್ನಾಥ ದೇವಾಲಯದ ಸೌಂದರ್ಯೀಕರಣ ಯೋಜನೆಯ ಭಾಗವಾಗಿ

ಳವಡಿಸಲಾಗಿದ್ದ, ಫೋಕಸ್ ಲೈಟ್‌ಗಳನ್ನು ಚುನಾವಣಾ ಫಲಿತಾಂಶದ ಎಣಿಕೆಯ ಸಂಜೆ ಮತ್ತು ಚುನಾವಣೆಯಲ್ಲಿ ಬಿಜೆಡಿ ಸೋಲಿನ ನಂತರ ತೆಗೆದುಹಾಕಲಾಯಿತು.

                ಈ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಒಡಿಶಾದ ಮುಖ್ಯ ಕಾರ್ಯದರ್ಶಿ ಪಿ.ಕೆ. ಜೆನಾ ಅವರು ಪುರಿ ಜಿಲ್ಲಾಡಳಿತಕ್ಕೆ ಆದೇಶಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

            'ದೇವಾಲಯದ ಮೇಲಿನ ಫೋಕಸ್ ಲೈಟ್‌ಗಳನ್ನು ತೆಗೆದುಹಾಕಿರುವ ಕುರಿತು ಮುಖ್ಯ ಕಾರ್ಯದರ್ಶಿಯಿಂದ ಸೂಚನೆಯನ್ನು ಸ್ವೀಕರಿಸಲಾಗಿದೆ. ಘಟನೆಯ ಬಗೆಗೆ ಸೂಕ್ತ ಕ್ರಮ ಕೈಗೊಳ್ಳುತ್ತಿದ್ದೇವೆ, ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೆ ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಲೈಟ್‌ಗಳನ್ನು ತೆಗೆದಿದೆ' ಎಂದು ಪುರಿ ಜಿಲ್ಲಾಧಿಕಾರಿ ಸಿದ್ಧಾರ್ಥ್ ಶಂಕರ್ ಸ್ವೈನ್ ಹೇಳಿದ್ದಾರೆ.

              ಕಳೆದ 2-3 ದಿನಗಳಿಂದ ಜಗನ್ನಾಥ ದೇವಾಲಯದ ಮೇಲೆ ಕೇಂದ್ರೀಕರಿಸಲು ಅಳವಡಿಸಲಾದ ಫೋಕಸ್ ಲೈಟ್‌ಗಳನ್ನು ತೆಗೆದಿರುವುದರಿಂದ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries