ಕೊಲ್ಲಂ: ಕುವೈತ್ನ ಮಂಗಾಫ್ನ ವಲಸೆಕಾರ್ಮಿಕರು ನೆಲೆಸಿದ್ದ ಕಟ್ಟಡದಲ್ಲಿ ಉಂಟಾಗಿರುವ ಅಗ್ನಿ ದುರಂತದಲ್ಲಿ ಕೇರಳದ ಕೊಲ್ಲಂ ಜಿಲ್ಲೆಯ ಓಯೂರ್ ನಿವಾಸಿ ಉಮರುದ್ದೀನ್ ಶಮೀರ್(33)ಎಂಬವರು ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೇರಳೀಯರು ಒಳಗೊಂಡಿದ್ದಾರೆನ್ನಲಾಗಿದೆ.
ಮಂಗೋಫ್ ಬ್ಲಾಕ್ ನಾಲ್ಕರಲ್ಲಿ ಕಾರ್ಮಿಕರೇ ಹೆಚ್ಚಾಗಿ ವಾಸಿಸುವ ಕಟ್ಟಡದಲ್ಲಿ ಬುಧವಾರ ನಸುಕಿನ 4.30ಕ್ಕೆ ಬೆಂಕಿ ಕಾಣಿಸಿಕೊಂಡಿದ್ದು, ಅಲ್ಪ ಕಾಲದಲ್ಲಿ ಕಟ್ಟಡಕ್ಕೆ ವ್ಯಾಪಿಸಿತ್ತು.ಎನ್ಬಿಟಿಸಿ ಕಂಪೆನಿಯ 195ಕ್ಕೂ ಹೆಚ್ಚು ಮಂದಿ ಈ ಕಟ್ಟಡದಲ್ಲಿ ವಾಸಿಸುತ್ತಿದ್ದಾರೆನ್ನಲಾಗಿದೆ. ಕೆಳ ಅಂತಸ್ತಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕೆಲವರು ಜೀವ ಉಳಿಸಿಕೊಲ್ಳುವ ನಿಟ್ಟಿನಲ್ಲಿ ಮೇಲಿನ ಮಹಡಿಯಿಂದ ಜಿಗಿಯುವಾಗ ಹಾಗೂ ದಟ್ಟ ಹೊಗೆ ಸೇವನೆಯಿಂದ ಸಾವನ್ನಪ್ಪಿದ್ದಾರೆ. ವಿದ್ಯುತ್ ಶಾರ್ಟ್ ಸಕ್ರ್ಯೂಟ್ ದುರಂತಕ್ಕೆ ಕಾರಣವೆಂದು ಮಾಹಿತಿಯಿದೆ.