HEALTH TIPS

ಹೊಸ ಪಠ್ಯಪುಸ್ತಕದ ಬಗ್ಗೆ ವಿವರಣೆ: ಗುಣಮಟ್ಟದ ಶಿಕ್ಷಣ ಆದ್ಯತೆ: ಸಚಿವ

              ತಿರುವನಂತಪುರಂ: ಈ ಶೈಕ್ಷಣಿಕ ವರ್ಷದಲ್ಲಿ ಬಿಡುಗಡೆಯಾದ 1ನೇ ತರಗತಿಯ ಕೇರಳ ಪಾಠಾವಳಿಯ ಮೊದಲ ವಿಭಾಗದಲ್ಲಿ ಮಲಯಾಳಂ ವರ್ಣಮಾಲೆಯ ಲೋಪ ವಿವಾದದ ವಾಗಿದೆ. 

               ಕಳೆದ ವರ್ಷದವರೆಗೂ ಒಂದನೇ ಮತ್ತು ಎರಡನೇ ತರಗತಿಯ ಪುಸ್ತಕಗಳ ಕೊನೆಯ ಭಾಗದಲ್ಲಿ ವರ್ಣಮಾಲೆಯನ್ನು ಮುದ್ರಿಸಲಾಗುತ್ತಿತ್ತು. ಪ್ರಸ್ತುತ ಅದೇ ವಿಧಾನ ಮುಂದುವರಿಯುತ್ತದೆಯಾದರೂ, ವಿಷಯ ಅವತರಣಿಕೆ ಕ್ರಮ ಬಲಪಡಿಸಲು ಮಧ್ಯಸ್ಥಿಕೆ ವಹಿಸಬೇಕು ಎಂದು ಸೂಚಿಸಲಾಗಿದೆ.

              5 ನೇ ತರಗತಿಯ ಮೂಲ ಪಠ್ಯಕ್ರಮದಲ್ಲಿ, 'ಪೀಲಿಯ ಹಳ್ಳಿ' ಎಂಬ ಪಾಠವು ಅಂಗವಿಕಲ ಮಹಿಳೆ ಮತ್ತು ವಲಸೆ ಕಾರ್ಮಿಕರ ಮಗಳನ್ನು ಪಾತ್ರಗಳಾಗಿ ಅಳವಡಿಸಿದ ಶಿಕ್ಷಣವನ್ನು ಒದಗಿಸುತ್ತದೆ. ಎಲ್ಲಾ ಪುಸ್ತಕಗಳ ಮೊದಲ ಭಾಗದಲ್ಲಿ 'ಸಂವಿಧಾನದ ಪರಿಚಯ' ಇದೆ. ಸಾಂವಿಧಾನಿಕವಾಗಿ, ಐದು ಪುಸ್ತಕಗಳ ಕೊನೆಯಲ್ಲಿ 'ಮಕ್ಕಳ ಹಕ್ಕುಗಳು' ಸೇರಿಸಲಾಗಿದೆ. ಏಳನೇ ತರಗತಿಯ ಸಮಾಜಶಾಸ್ತ್ರದಲ್ಲಿ ಪೆÇೀಕ್ಸೋ ನಿಯಮ ಪಠ್ಯವನ್ನು ಸಹ ಸೇರಿಸಲಾಗಿದೆ. 

            ಕೆಲಸದ ಸಮಗ್ರ ಅಧ್ಯಯನಕ್ಕಾಗಿ 5 ನೇ ತರಗತಿಯ ಚಟುವಟಿಕೆ ಪುಸ್ತಕದಲ್ಲಿ ಕೃಷಿ ಪಾಠವಿದೆ. ಏಳನೇ ಚಟುವಟಿಕೆ ಪುಸ್ತಕದಲ್ಲಿ, ತ್ಯಾಜ್ಯ ವಿಲೇವಾರಿ ಪಾಠವು ಕೊಳವೆ ಬಾವಿ ಮತ್ತು ವಿದ್ಯುತ್ ಕೆಲಸಗಳ ವಿವರಣೆಗಳೊಂದಿಗೆ ಇವೆ. 

              ಗುಣಮಟ್ಟದ ಶಿಕ್ಷಣ ದೊರೆಯಲಿದೆ -ವಿ. ಶಿವನ್‍ಕುಟ್ಟಿ

               ತಿರುವನಂತಪುರ: ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಸಚಿವ ವಿ. ಶಿವನ್‍ಕುಟ್ಟಿ ಹೇಳಿದರು.

                ಸಮವಸ್ತ್ರ ವಿತರಣೆ ಬಹುತೇಕ ಪೂರ್ಣಗೊಂಡಿದೆ. ಪಠ್ಯಪುಸ್ತಕಗಳನ್ನು ಶಾಲೆಗೆ ಕಳಿಸಲಾಗಿದೆ.  ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಪ್ರತಿ ತರಗತಿಯ ಕಲಿಕೆಯ ಉದ್ದೇಶಗಳನ್ನು ಸಾಧಿಸಲು ಮಕ್ಕಳಿಗೆ ಕಲಿಕೆಯ ಅನುಭವವನ್ನು ತಯಾರಿಸಲು ಮತ್ತು ಅವರ ವಯಸ್ಸಿಗೆ ಮೀರಿದ ಮಕ್ಕಳನ್ನು ಹೇಗೆ ಕಲಿಯಬೇಕು ಮತ್ತು ಬೆಂಬಲಿಸಬೇಕು ಎಂಬುದರ ಕುರಿತು ಮಾರ್ಗದರ್ಶನದೊಂದಿಗೆ ಮೊದಲ ಬಾರಿಗೆ ಪೋಷಕರಿಗೆ ಪುಸ್ತಕವನ್ನು ಸಿದ್ಧಪಡಿಸಲಾಗಿದೆ. ತ್ಯಾಜ್ಯ ವಿಲೇವಾರಿ ಜೀವನ ರೂಢಿಸಿಕೊಳ್ಳಲೂ ಪಠ್ಯಗಳಿವೆ. 

               ಆರೋಗ್ಯಕರ ಅಭ್ಯಾಸಗಳು ಸಹ ಮುಖ್ಯವಾಗಿದೆ. ಇದೆಲ್ಲದಕ್ಕೂ ಈ ವರ್ಷ ‘ಸುಚಿತ್ವವಿದ್ಯಾಲಯಂ ಹರಿತವಿದ್ಯಾಲಯ’ ಅಭಿಯಾನ ನಡೆಯಲಿದೆ. ಗಣಿತಕ್ಕೆ ಮಂಜಾಡಿ ಮತ್ತು ವಿಜ್ಞಾನಕ್ಕೆ ಮಳವಿಲ್‍ನಂತಹ ವಿನೂತನ ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ಸಚಿವರು ಹೇಳಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries