ಕಾಸರಗೋಡು: ಕುವೈತ್ನ ಮಂಗಾಫ್ನ ವಲಸೆಕಾರ್ಮಿಕರು ನೆಲೆಸಿದ್ದ ಕಟ್ಟಡದಲ್ಲಿ ಉಂಟಾಗಿರುವ ಅಗ್ನಿ ದುರಂತದಲ್ಲಿ ಒಟ್ಟು 49ಮಂದಿ ಮೃತಪಟ್ಟಿದ್ದು, ಇವರಲ್ಲಿ ಕಾಸರಗೋಡಿನ ಇಬ್ಬರು ಒಳಗೊಂಡಿದ್ದಾರೆ. ಕಾಸರಗೋಡಿನ ಇಬ್ಬರ ಮೃತದೇಹದ ಗುರುತು ಪತ್ತೆಯಾಗಿದೆ. ಕಾಸರಗೋಡು ಚೆರ್ಕಳ ಕುಂಡಡ್ಕ ನಿವಾಸಿ ರಂಜಿತ್(34) ಹಾಗೂ ಪಿಲಿಕ್ಕೋಡ್ ನಿವಾಸಿ, ಎಳಂಬಚ್ಚಿಯಲ್ಲಿ ವಾಸಿಸುತ್ತಿರುವ ಕೇಳು ಪೊನ್ಮಲೆರಿ(58)ಎಂಬವರು ಮೃತಪಟ್ವವರು. ರಂಜಿತ್ ಕಳೆದ ಎಂಟು ವರ್ಷಗಳಿಂದ ಕುವೈತ್ನಲ್ಲಿ ಕೆಲಸದಲ್ಲಿದ್ದು, ಒಂದು ವರ್ಷದ ಹಿಂದೆ ತಮ್ಮ ನೂತನ ಮನೆಯ ಗೃಹಪ್ರವೇಶಕ್ಕೆ ಆಗಮಿಸಿ ವಾಪಸಾಗಿದ್ದರು. ಕೇಳು ಅವರು ಕುವೈತ್ನ ಖಾಸಗಿ ಕಂಪೆನಿಯೊಂದರ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.ಜಿವರು ಕಳೆದ 25ವರ್ಷಗಳಿಂದ ಕುವೈತ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಈ ಮೂಲಕ ಕೇರಳದ ಒಟ್ಟು ಒಂಬತ್ತು ಮಂದಿಯ ಮೃತದೇಹದ ಗುರುತು ಪತ್ತೆಹಚ್ಚಲಾಗಿದೆ. ಕೊಲ್ಲಂ ಜಿಲ್ಲೆಯ ಓಯೂರ್ ನಿವಾಸಿ ಉಮರುದ್ದೀನ್ ಶಮೀರ್(33), ಪಂದಳಂ ನಿವಾಸಿ ಆಕಾಶ್, ಶಶಿಧರನ್ ನಾಯರ್ ಎಂಬವರ ಗುರುತು ಈಗಾಗಲೇ ಪತ್ತೆಹಚ್ಚಲಾಗಿದೆ.