HEALTH TIPS

ಸಾಹಿತ್ಯ ನಗರಿ ಘೋಷಣೆಯನ್ನು ಸಾಂಸ್ಕøತಿಕ ದೂಷಣೆಯಾಗಿ ರಾಜಕೀಯಗೊಳಿಸಲಾಗಿದೆ: ತಪಸ್ಯ

             ಕೋಝಿಕ್ಕೋಡ್: ಕೋಝಿಕ್ಕೋಡ್ ನಗರವನ್ನು ಯುನೆಸ್ಕೋ ಸಾಹಿತ್ಯ ನಗರವೆಂದು ಘೋಷಿಸುವ ಸಮಾರಂಭವನ್ನು ಎಡರಂಗದ ಸರ್ಕಾರವು ಸಾಂಸ್ಕೃತಿಕ ದೂಷಣೆಯ ರಾಜಕೀಯ ಕಾರ್ಯಕ್ರಮವನ್ನಾಗಿ ಪರಿವರ್ತಿಸಿದೆ ಎಂದು ತಪಸ್ಯ ಕಲಾಸಾಹಿತ್ಯವೇದಿಕೆ ಆರೋಪಿಸಿದೆ.

            ತಪಸ್ಯ ರಾಜ್ಯ ಕಾರ್ಯಾಧ್ಯಕ್ಷ ಪ್ರೊ. ಪಿಜಿ ಹರಿದಾಸ್ ಮತ್ತು ಪ್ರಧಾನ ಕಾರ್ಯದರ್ಶಿ ಕೆ.ಟಿ. ರಾಮಚಂದ್ರನ್ ಅವರು ಈ ಬಗ್ಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

            ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಲ್ಲಿದ್ದರೂ ಕಾರ್ಯಕ್ರಮದಲ್ಲಿ ಭಾಗವಹಿಸದೆ ವಾಪಸ್ ತೆರಳಿದ್ದು ಅವರ ಸ್ಥಾನಮಾನಕ್ಕೆ ತಕ್ಕುದಲ್ಲ. ಟೀಕೆಗೆ ಹೆದರಿ ಎಂ.ಟಿ. ವಾಸುದೇವನ್ ನಾಯರ್ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲು ಮುಖ್ಯಮಂತ್ರಿ ಸಿದ್ಧರಿರಲಿಲ್ಲವೇ ಎಂಬುದು ತಿಳಿಯಬೇಕಿದೆ. ವೇದಿಕೆಯಲ್ಲಿ ಮುಖ್ಯಮಂತ್ರಿ ಹಾಗೂ ಎಂ.ಟಿ. ಇವರಿಬ್ಬರೂ ಆಗಮಿಸದಿರುವುದು ಕೋಝಿಕ್ಕೋಡ್ ನ ಸಾಂಸ್ಕೃತಿಕ ಪರಂಪರೆಯ ಪ್ರೇಮಿಗಳಿಗೆ ನಿರಾಸೆ ಮೂಡಿಸಿದೆ.

            ಸಾಹಿತ್ಯ, ಸಾಂಸ್ಕೃತಿಕ ವೀರರ ಬದಲಿಗೆ ಸಚಿವ ಎಂ.ಬಿ. ರಾಜೇಶ್, ಸಚಿವರಾದ ಮೊಹಮ್ಮದ್ ರಿಯಾಜ್, ರವೀಂದ್ರನ್ ಮತ್ತು ಎ. ಪ್ರದೀಪ್ ಕುಮಾರ್ ಮತ್ತು ಟಿ.ಪಿ. ದಾಸನ್ ವೇದಿಕೆಯನ್ನು ಏರಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ರಾಜಕೀಯಗೊಳಿಸಿದರು.

           ನಗರ ವ್ಯಾಪ್ತಿಯಲ್ಲಿ ನೆಲೆಸಿರುವ ಸಾಹಿತಿಗಳನ್ನೂ ವೇದಿಕೆಗೆ ತರಲು ಸಾಧ್ಯವಾಗದಿರುವುದು ಸಂಘಟಕರ ತಪ್ಪು. ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಮತೀಯವಾದವನ್ನು ಒಪ್ಪಿಕೊಳ್ಳುವ ಸಿಪಿಎಂ ಮತ್ತು ಸರ್ಕಾರದ ನಡೆ ಒಪ್ಪಲಾಗದು ಎಂದು ತಪಸ್ಯ ತಿಳಿಸಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries