ಕಾಸರಗೋಡು: ಆಲ್ ಕೇರಳ ಫೆÇೀಟೋಗ್ರಾಫರ್ಸ್ ಅಸೋಸಿಯೇಷನ್(ಎಕೆಪಿಎ) ಕಾಸರಗೋಡು ವೆಸ್ಟ್ಯೂನಿಟ್ ವತಿಯಿಂದ ವಿಶ್ವ ಪರಿಸರ ದಿನವನ್ನು ಉಳಿಯತ್ತಡ್ಕ, ಸಿರಿಬಾಗಿಲು ಸರ್ಕಾರಿ ವೆಲ್ಫೇರ್ ಎಲ್.ಪಿ. ಶಾಲಾ ವಠಾರದಲ್ಲಿ ಆಚರಿಸಲಾಯಿತು.
ಮಧೂರು ಗ್ರಾಮ ಪಂಚಾಯಿತಿ ಸದಸ್ಯ ಬಶೀರ್ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿದರು. ಶಾಲಾ ಮುಖ್ಯ ಶಿಕ್ಷಕಿ ಶಶಿಕಲ.ಎಚ್ ಅಧ್ಯಕ್ಷತೆ ವಹಿಸಿದರು.
ಕಾಸರಗೋಡಿನ ಹಿರಿಯ ಸಾಹಿತಿ, ಗಡಿನಾಡ ಚೇತನ ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತ ರಾಧಾಕೃಷ್ಣ. ಕೆ ಉಳಿಯತ್ತಡ್ಕ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಝಕೀರ್ ಕುನ್ನಿಲ್, ಎಂ.ಪಿ.ಟಿ.ಎ ಪದಾಧಿಕಾರಿಗಳು ಭಾಗವಹಿಸಿದ್ದರು.
ಫೆÇೀಟೋಗ್ರಾಫರ್ಸ್ ಅಸೋಸಿಯೇಶನ್ ಕಾಸರಗೋಡು ವಲಯ ಅಧ್ಯಕ್ಷ ವಾಸು.ಎ, ವಲಯಪಿ.ಆರ್.ಒ ಚಂದ್ರಶೇಖರ.ಎಂ, ಜತೆಕಾರ್ಯದರ್ಶಿ ಮನೋಜ್ ಕುಮಾರ್, ಎಕೆಪಿಎ ಜಿಲ್ಲಾ ಸಮಿತಿ ಸದಸ್ಯ ರತೀಶ್ ರಾಮುವಿಡಿಯೋ, ಯೂನಿಟ್ ಉಪಾಧ್ಯಕ್ಷ ಹಾಗೂ ಸಾಂತ್ವನ ಕೋರ್ಡಿನೇಟರ್ ಗಣೇಶ್ ರೈ, ಕಾರ್ಯದರ್ಶಿ ವಸಂತ್ ಕೆರೆಮನೆ, ಕೋಶಾಧಿಕಾರಿ ಅಮಿತ್, ಜತೆಕಾರ್ಯದರ್ಶಿ ವಿಶಾಖ್, ಯೂನಿಟ್ ನಿರೀಕ್ಷಕ ಪ್ರಮೊದ್ ಐಫೆÇೀಕಸ್, ಯೂನಿಟ್ ಸದಸ್ಯ ಮೌನೇಶ್ ಕುಮಾರ್ ಹಾಗೂ ಶಾಲಾ ಅದ್ಯಾಪಿಕೆಯರು, ಸಹಾಯರು ಉಪಸ್ಥಿತರಿದ್ದರು.