HEALTH TIPS

ಪತ್ರಕರ್ತ ಮುರಳೀಧರ ರೆಡ್ಡಿ ನಿಧನ

          ವದೆಹಲಿ: 'ದಿ ಹಿಂದೂ' ಪತ್ರಿಕೆಯಲ್ಲಿ ದೀರ್ಘಾವಧಿ ಕೆಲಸ ಮಾಡಿದ್ದ ಪತ್ರಕರ್ತ ಬಿ. ಮುರಳೀಧರ ರೆಡ್ಡಿ (64) ನಿಧನರಾದರು.

           'ದಿ ಹಿಂದೂ' ಪತ್ರಿಕೆಗೆ ಪಾಕಿಸ್ತಾನ ಹಾಗೂ ಶ್ರೀಲಂಕಾ ಪ್ರತಿನಿಧಿಯಾಗಿ ವರದಿಗಳನ್ನು ಮಾಡಿದ್ದ ಅವರು, ರಾಮ್‌ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ ಅನಾರೋಗ್ಯದಿಂದಾಗಿ ಮೃತಪಟ್ಟರು.

              ಪಿಟಿಐ ಸುದ್ದಿಸಂಸ್ಥೆಯ ಮಾಜಿ ಪತ್ರಕರ್ತೆ ಅಪರ್ಣಾ ಶ್ರೀವಾಸ್ತವ ಅವರು ಮುರಳೀಧರ ರೆಡ್ಡಿ ಅವರ ಪತ್ನಿ. ಮೃತರಿಗೆ ಒಬ್ಬ ಪುತ್ರ ಇದ್ದಾರೆ.

             ಮೋಟರ್ ನ್ಯೂರಾನ್ ಕಾಯಿಲೆಯಿಂದ (ಎಂಎನ್‌ಡಿ) ಬಳಲುತ್ತಿದ್ದ ಮುರಳೀಧರ ರೆಡ್ಡಿ ಅವರು ಒಂದು ತಿಂಗಳಿನಿಂದ ಕೃತಕ ಉಸಿರಾಟದ ವ್ಯವಸ್ಥೆಯಿಂದಲೇ ಬದುಕಿದ್ದರು. ಎರಡು ವಾರಗಳ ಹಿಂದೆ ಹೃದಯಾಘಾತದ ನಂತರ ಅವರಿಗೆ ಪ್ರಜ್ಞೆ ತಪ್ಪಿತ್ತು.

               ರಾಜಕೀಯ ವಿದ್ಯಮಾನಗಳೂ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅವರು ವರದಿಗಳನ್ನು ಬರೆದಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries