ಬದಿಯಡ್ಕ: ಬದಿಯಡ್ಕ ಹಾಗೂ ಕಾಸರಗೋಡು ಪೊಲೀಸ್ ಠಾಣೆ ವ್ಯಾಪ್ತಿಯಿಂದ ಹದಿನೈದಕ್ಕೂ ಹೆಚ್ಚು ಆಡುಗಳನ್ನು ಕಳವುಗೈದ ಇಬ್ಬರು ಆರೋಪಿಗಳನ್ನು ಬದಿಯಡ್ಕ ಠಾಣೆ ಎಸ್.ಐ ಎನ್. ಅನ್ಸಾರ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ಬದಿಯಡ್ಕ ಮೂಕಂಪಾರೆ ನಿವಾಸಿಗಳು ಹಾಗೂ ಸಹೋದರರಾದ ಮಹಮ್ಮದ್ ಶೆಫೀಕ್ ಹಾಗೂ ಇಬ್ರಹಿಂ ಖಲೀಲ್ ಬಂಧಿತರು. ಇನ್ನೊಬ್ಬ ಆರೋಪಿ ಸಿದ್ದಿಕ್ ಸಾಲತ್ತಡ್ಕ ಎಂಬಾತ ತಲೆಮರೆಸಿಕೊಂಡಿದ್ದಾರೆ.
ಆರೋಪಿಗಳು ಸಂಚರಿಸಲು ಬಳಸಿದ್ದ ಕಾರನ್ನೂ ವಶಪಡಿಸಿಕೊಂಡಿದ್ದಾರೆ. ಕಾರಿನಲ್ಲಿ ಸಂಚರಿಸುತ್ತಾ ಮೇಯಲು ಬಿಟ್ಟ ಆಡುಗಳನ್ನು ಕಾರಿನೊಳಗೆ ಹಾಕಿಕೊಂಡು ಸಣ್ಣ ಮೊತ್ತಕ್ಕೆ ಇವುಗಳನ್ನು ಮಾರಾಟ ಮಾಡುವುದು ಆರೋಪಿಗಳ ದಂಧೆಯಾಗಿದೆ. ಕಳವುಗೈದು ಚಾತಪ್ಪಾಡಿ ಸನಿಹ ಮಾರಾಟ ಮಾಡಲಾದ ಆಡುಗಳನ್ನು ಪೊಲೀಸರು ಪತ್ತೆಹಚ್ಚಿ ಠಾಣೆಯಲ್ಲಿ ಬಿಗಿದಿದ್ದಾರೆ. ಠಾಣೆಯಲ್ಲಿ ಆಡುಗಳ ಕೂಗಾಟ ಪೊಲೀಸರಿಗೆ ತಲೆನೋವು ಉಂಟುಮಾಡಿದ್ದರೆ, ಸಾರ್ವಜನಿಕರ ಪಾಲಿಗೆ ಕೌತುಕವಾಗಿದೆ. ಆಡು ಕಳೆದುಕೊಮಡವರು, ಒಬ್ಬೊಬ್ಬರಾಗಿ ಆಗಮಿಸಿ ತಮ್ಮ ಆಡುಇನ ಪರಿಚಯ ಪತ್ತೆಹಚ್ಚುತ್ತಿದ್ದಾರೆ.
: ಬದಿಯಡ್ಕ ಠಾಣೆಯಲ್ಲಿ ಬಿಗಿಯಲಾಗಿರುವ ಆಡುಗಳು.