ಕುಂಬಳೆ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮಂಜೇಶ್ವರ ತಾಲೂಕು ಮಟ್ಟದ ಕಾರ್ಯಕ್ರಮ ಎಡನಾಡು-ಕಣ್ಣೂರು ಸೇವಾ ಸಹಕಾರಿ ಬ್ಯಾಂಕಿನಲ್ಲಿ ಜರಗಿತು.
ಮಂಜೇಶ್ವರ ತಾಲೂಕು ಸಹಾಯಕ ರಿಜಿಸ್ಟ್ರಾರ್ ಕಛೇರಿಯ ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ಹಲಸಿನ ಗಿಡವನ್ನು ನೆಟ್ಟು ಉದ್ಘಾಟಿಸಿದರು. ಬ್ಯಾಂಕ್ ಅಧ್ಯಕ್ಷ ಜಯಂತ ಪಾಟಾಳಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಮಟ್ಟದ ಸಹಕಾರಿ ಬ್ಯಾಂಕ್ಗಳ ಅಧ್ಯಕ್ಷರು, ಕಾಯ9ದರ್ಶಿಗಳು ಪಾಲ್ಗೊಂಡಿದ್ದರು. ಗಣ್ಯರು ಶುಭ ಹಾರೈಸಿ ಮಾತನಾಡಿದರು. ಬ್ಯಾಂಕಿನ ನಿದೇ9ಶಕರು, ಕಾರ್ಯದರ್ಶಿ ಸದಸ್ಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಲಕ್ಷ್ಮಿ.ವಿ.ಭಟ್ ವಂದಿಸಿದರು.