HEALTH TIPS

ಸಾಹಸ ಪ್ರವಾಸಿಗರಿಗೆ ಕೇರಳ ನೆಚ್ಚಿನ ತಾಣ: ಸಾಹಸ ಪ್ರಿಯರಿಗಾಗಿ ನಾಲ್ಕು ಜಾಗತಿಕ ಕಾರ್ಯಕ್ರಮ

                     ತಿರುವನಂತಪುರಂ: ಪ್ರವಾಸೋದ್ಯಮ ಇಲಾಖೆಯು ಸುಮಾರು ಹನ್ನೆರಡು ಹೊಸ ಸ್ಥಳಗಳನ್ನು ಗುರುತಿಸುವ ಮೂಲಕ ಸಾಹಸ-ಕ್ಯಾಂಪಿಂಗ್ ಪ್ರವಾಸೋದ್ಯಮದ ಸಾಮಥ್ರ್ಯವನ್ನು ಬಳಸಿಕೊಳ್ಳಲು ನಿರ್ಧರಿಸಿದೆ.

                   ಕೇರಳ ಪ್ರವಾಸೋದ್ಯಮವು ಸಾಧ್ಯವಾದಷ್ಟು ಹೆಚ್ಚು ಸಾಹಸ ಪ್ರಿಯ ಪ್ರವಾಸಿಗರನ್ನು ಕೇರಳಕ್ಕೆ ಕರೆತರಲು ಮತ್ತು ಜಾಗತಿಕ ಸಾಹಸ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಛಾಪು ಮೂಡಿಸಲು ನಾಲ್ಕು ಅಂತರರಾಷ್ಟ್ರೀಯ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ.

                 ಪ್ಯಾರಾಗ್ಲೈಡಿಂಗ್, ಸರ್ಫಿಂಗ್, ಮೌಂಟೇನ್ ಬೈಕಿಂಗ್ ಮತ್ತು ವೈಟ್ ವಾಟರ್ ಕಯಾಕಿಂಗ್‍ನಲ್ಲಿ ಅಂತರಾಷ್ಟ್ರೀಯ ಸ್ಪರ್ಧೆಗಳು ಕೇರಳದ ಕೆಲವು ಪ್ರವಾಸಿ ತಾಣಗಳಲ್ಲಿ ನಡೆಯುತ್ತವೆ.

                   ಪ್ರವಾಸೋದ್ಯಮ ಸಚಿವ ಪಿ.ಎ.ಮುಹಮ್ಮದ್ ರಿಯಾಝ್ ಮಾತನಾಡಿ, ಸಾಹಸ ಪ್ರವಾಸೋದ್ಯಮ ಈಗ ಹೆಚ್ಚು ಗಮನ ಸೆಳೆಯುತ್ತಿದೆ. ಕೇರಳವು ಜಾಗತಿಕ ಸಾಹಸ ಪ್ರವಾಸೋದ್ಯಮ ತಾಣವಾಗಿ ಹೊರಹೊಮ್ಮುವ ದೊಡ್ಡ ಸಾಮಥ್ರ್ಯವನ್ನು ಹೊಂದಿದೆ. ಜಲಕ್ರೀಡೆ ಸಾಹಸ ಪ್ರವಾಸೋದ್ಯಮ ಪ್ರವರ್ತಕರು ಮತ್ತು ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ ಕ್ಷೇತ್ರವನ್ನು ಬಲಪಡಿಸಲು ಪ್ರವಾಸೋದ್ಯಮ ಇಲಾಖೆ ದೊಡ್ಡ ಯೋಜನೆಗಳನ್ನು ಹೊಂದಿದೆ ಎಂದು ಹೇಳಿದರು.

                  ವಿಶ್ವ ದರ್ಜೆಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಹೆಚ್ಚು ಗಮನ ಹರಿಸುತ್ತಿದೆ ಮತ್ತು ಉತ್ಸಾಹ ಮತ್ತು ಸಾಹಸವನ್ನು ಇಷ್ಟಪಡುವವರಿಗೆ ಕೇರಳವನ್ನು ನೆಚ್ಚಿನ ತಾಣವನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು.

                ಇಡುಕ್ಕಿ, ವಯನಾಡು, ಕಣ್ಣೂರು, ಕೋಯಿಕ್ಕೋಡ್, ತಿರುವನಂತಪುರಂ, ಕಾಸರಗೋಡು, ಮಲಪ್ಪುರಂ ಮತ್ತು ಎರ್ನಾಕುಳಂ ಜಿಲ್ಲೆಗಳಲ್ಲಿ ಸಾಹಸ ಪ್ರವಾಸೋದ್ಯಮ ಚಟುವಟಿಕೆಗಳು ಮುಖ್ಯವಾಗಿ ನಡೆಯುತ್ತಿವೆ. ಜಲಕ್ರೀಡೆ, ಟ್ರೆಕ್ಕಿಂಗ್ ಮತ್ತು ಪ್ಯಾರಾಗ್ಲೈಡಿಂಗ್‍ಗಳಿಗೂ ಇದು ಸೂಕ್ತ ಸ್ಥಳವಾಗಿದೆ.

         ಈ ವರ್ಗಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಪ್ರವಾಸೋದ್ಯಮ ವಲಯದಿಂದ 23.5 ಕೋಟಿ ಗಳಿಸಲಾಗಿದೆ. ಸ್ಥಳೀಯ ನಿವಾಸಿಗಳಿಗೆ ಉತ್ತಮ ಅವಕಾಶಗಳ ಜೊತೆಗೆ, 3000 ಕ್ಕೂ ಹೆಚ್ಚು ಖಾಯಂ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ.

              ರಾಜ್ಯ ಸರ್ಕಾರವು ಈ ಹಿಂದೆ ಕ್ಯಾಂಪಿಂಗ್ - ಸಾಹಸ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಸುರಕ್ಷತಾ ನಿಯಮಗಳನ್ನು ಹೊರಡಿಸಿತ್ತು.

              ಸಾರ್ವಜನಿಕ-ಖಾಸಗಿ ಪಾಲುದಾರಿಕೆಯ ಮಾದರಿಯಲ್ಲಿ ಚಟುವಟಿಕೆಗಳನ್ನು ಸಂಯೋಜಿಸಲಾಗಿದೆ. ಖಾಸಗಿ ವಲಯದಲ್ಲಿ ಸುಮಾರು 200 ಮಂದಿ ಸಾಹಸ ಪ್ರವಾಸೋದ್ಯಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. 60 ಮಂದಿ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ.

                 ವರ್ಷದ ಮೊದಲ ಈವೆಂಟ್, 'ಅಂತರರಾಷ್ಟ್ರೀಯ ಪ್ಯಾರಾಗ್ಲೈಡಿಂಗ್ ಸ್ಪರ್ಧೆ 2024' ಮಾರ್ಚ್ 14 ರಿಂದ 17 ರವರೆಗೆ ಇಡುಕ್ಕಿಯ ವಾಗಮನ್‍ನಲ್ಲಿ ನಡೆಯಿತು. ಭಾರತದ ಅತಿದೊಡ್ಡ ಏರೋ ಸ್ಪೋಟ್ರ್ಸ್ ಅಡ್ವೆಂಚರ್ ಫೆಸ್ಟಿವಲ್‍ನಲ್ಲಿ 100 ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಸಿದ್ಧ ಗ್ಲೈಡರ್‍ಗಳು ಭಾಗವಹಿಸಿದ್ದರು. ಫ್ರಾನ್ಸ್, ಜರ್ಮನಿ, ಇಟಲಿ, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಯುಎಸ್, ಯುಕೆ ಮತ್ತು ನೇಪಾಳದಂತಹ ದೇಶಗಳಿಂದ ಸ್ಪರ್ಧಿಗಳು ಬಂದಿದ್ದರು.

                ಮಾರ್ಚ್‍ನಲ್ಲಿ ವರ್ಕಲಾ ಬೀಚ್‍ನಲ್ಲಿ ಮೂರು ದಿನಗಳ ಅಂತರಾಷ್ಟ್ರೀಯ ಸಫಿರ್ಂಗ್ ಉತ್ಸವವನ್ನು ಆಯೋಜಿಸಲಾಗಿತ್ತು. ಭಾರತದಲ್ಲಿ ಮೊದಲ ಬಾರಿಗೆ ಇದನ್ನು ಮಾಡಲಾಗಿದೆ. ಜಾಗತಿಕ ಮಟ್ಟದಲ್ಲಿ ಜಲಕ್ರೀಡಾ ಕೇಂದ್ರವಾಗಲು ಹೆಚ್ಚಿನ ಸಾಮಥ್ರ್ಯ ಹೊಂದಿರುವ ಕೇರಳವು ದೇಶದ ಪ್ರಮುಖ ಸಫಿರ್ಂಗ್ ಕೇಂದ್ರವಾಗಿ ಹೊರಹೊಮ್ಮುತ್ತಿದೆ.

                7ನೇ ಆವೃತ್ತಿಯ 'ಅಂತರರಾಷ್ಟ್ರೀಯ ಮೌಂಟೇನ್ ಸೈಕ್ಲಿಂಗ್ ಚಾಂಪಿಯನ್‍ಶಿಪ್' (ಒಖಿಃ ಕೇರಳ- 2024) ಏಪ್ರಿಲ್‍ನಲ್ಲಿ ವಯನಾಡಿನ ಮನಂತವಾಡಿ ಪ್ರಿಯದರ್ಶಿನಿ ಟೀ ಪ್ಲಾಂಟೇಶನ್‍ನಲ್ಲಿ ನಡೆಯಿತು. ಕ್ರಾಸ್ ಕಂಟ್ರಿ ಸ್ಪರ್ಧೆಯಲ್ಲಿ 25 ದೇಶಗಳ ಸೈಕ್ಲಿಸ್ಟ್‍ಗಳು ಭಾಗವಹಿಸಿದ್ದರು.

                  ಕೋಝಿಕ್ಕೋಡ್ ಆಯೋಜಿಸಿದ ಮಲಬಾರ್ ನದಿ ಉತ್ಸವ. ಚಾಲಿಯಾರ್ ನದಿಯಲ್ಲಿ ಮೂರು ದಿನಗಳ ಅಂತಾರಾಷ್ಟ್ರೀಯ ವೈಟ್ ವಾಟರ್ ಕಯಾಕಿಂಗ್ ಸ್ಪರ್ಧೆ ನಡೆಯಿತು.

                ಕೇರಳ ಅಡ್ವೆಂಚರ್ ಟೂರಿಸಂ ಪ್ರಮೋಷನ್ ಸೊಸೈಟಿ (ಏಂಖಿPS), ವಯನಾಡ್ ಜಿಲ್ಲಾ ಪ್ರವಾಸೋದ್ಯಮ ಪ್ರಮೋಷನ್ ಕೌನ್ಸಿಲ್  ಮತ್ತು ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾದ ನೇತೃತ್ವದಲ್ಲಿ ಪ್ರವಾಸೋದ್ಯಮ ಇಲಾಖೆಯು ಚಾಂಪಿಯನ್‍ಶಿಪ್ ಅನ್ನು ಆಯೋಜಿಸಿದೆ.

            ಮಲಬಾರ್ ನದಿ ಉತ್ಸವದ 10 ನೇ ಆವೃತ್ತಿಯು ಅದರ ಸಾಂಸ್ಥಿಕ ಶ್ರೇಷ್ಠತೆ ಮತ್ತು ಸಂದರ್ಶಕರ ಭಾಗವಹಿಸುವಿಕೆಗೆ ಹೆಸರುವಾಸಿಯಾಗಿದೆ, ಇದು ಜುಲೈ 25 ರಿಂದ 28 ರವರೆಗೆ ನಡೆಯಲಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries