ಕಾಸರಗೋಡು: ಓದುವಿಕೆ ಬೌದ್ಧಿಕ ವಿಕಾಸದ ಜತೆಗೆ ಸಾಮಾಜಿಕ ಅರಿವಿನ ಹೆಚ್ಚಳಕ್ಕೆ ಸಹಕಾರಿಯಾಗುವುದಾಗಿ ಜಿಲ್ಲಾ ಗ್ರಂಥಾಲಯ ಪರಿಷತ್ತಿನ ಅಧ್ಯಕ್ಷ ಕೆ.ವಿ. ಕುಞÂರಮನ್ ತಿಳಿಸಿದ್ದಾರೆ. ಅವರು ಜಿಲ್ಲಾ ಲೈಬ್ರರಿ ಕೌನ್ಸಿಲ್ ವತಿಯಿಂದ 63666ರೂ. ಮೌಲ್ಯದ ಪುಸ್ತಕಗಳನ್ನು ಹೊಸದುರ್ಗ ಜಿಲ್ಲಾ ಕಾರಾಗೃಹದ ಗ್ರಂಥಾಲಯಕ್ಕೆ ಹಸ್ತಾಂತರಿಸಿ ಮಾತನಾಡಿದರು.
ಪುಸ್ತಕ ಹಸ್ತಾಂತರ ಸಮಾರಂಭವನ್ನು ಕೆ.ವಿ ಕುಞÂರಾಮನ್ ಉದ್ಘಾಟಿಸಿದರು. ಜೈಲು ಅಧೀಕ್ಷಕ ಕೆ. ವೇಣು ಅಧ್ಯಕ್ಷತೆ ವಹಿಸಿದ್ದರು. ಗ್ರಂಥಾಲಯ ಪರಿಷತ್ತು ಜತೆ ಕಾರ್ಯದರ್ಶಿ ಟಿ. ರಾಜನ್, ನೋಬಿ ಸೆಬಾಸ್ಟಿಯನ್, ಎಂ.ವಿಸಂತೋಷ್ ಕುಮಾರ್, ಪ್ರತೀಶ್ ಮೋಹನ್ ಉಪಸ್ಥೀತರಿದ್ದರು. ಈ ಸಂದರ್ಭ ಕಥಾ ರಚನೆ ಸ್ಪರ್ಧಾ ವಇಜೇತರಿಗೆ ಕೆ.ವಿ ಕುಞÂರಾಮನ್ ಬಹುಮಾನ ವಿತರಿಸಿದರು.