HEALTH TIPS

ಪಾಕಿಸ್ತಾನದಿಂದ ಸುಳ್ಳು ಸಂಕಥನ: ಭಾರತ ಅಸಮಾಧಾನ

         ವಿಶ್ವಸಂಸ್ಥೆ: ಕಾಶ್ಮೀರವನ್ನು ಉಲ್ಲೇಖಿಸಿ ಆಧಾರರಹಿತ ಸಂಕಥನಗಳನ್ನು ಹರಿಬಿಟ್ಟಿದ್ದಕ್ಕಾಗಿ ಭಾರತವು ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ ಪಾಕಿಸ್ತಾನದ ನಿಯೋಗದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.

             ವಿಶ್ವಸಂಸ್ಥೆಯ ಭಾರತದ ಶಾಶ್ವತ ಆಯೋಗದ ರಾಯಭಾರಿ ಪ್ರತೀಕ್‌ ಮಾಥೂರ್‌ ಅವರು ವಾರ್ಷಿಕ ವರದಿ ಮಂಡನೆ ವೇಳೆ, 'ದಿನದ ಆರಂಭದಲ್ಲಿ ನಿಯೋಗವೊಂದು ತನ್ನ ಸುಳ್ಳು ಸಂಕಥನವನ್ನು ಪ್ರಚಾರಪಡಿಸಲು ಈ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡಿದೆ.

           ಇದರಿಂದ ನಮಗೇನೂ ಆಶ್ಚರ್ಯವಾಗಿಲ್ಲ. ಈ ವೇದಿಕೆಯ ಸಮಯವನ್ನು ಹಾಳುಮಾಡಬಾರದು ಎಂಬ ಉದ್ದೇಶದಿಂದ ಆ ಸುಳ್ಳು ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುತ್ತಿಲ್ಲ' ಎಂದರು.

                ಪಾಕಿಸ್ತಾನದ ವಿಶ್ವಸಂಸ್ಥೆ ರಾಯಭಾರಿ ಮುನೀರ್‌ ಅಕ್ರಮ್‌ ಅವರು ಚರ್ಚೆ ವೇಳೆ ಕಾಶ್ಮೀರ ಕುರಿತು ಮಾತನಾಡಿದ್ದರು. ವಿಶ್ವಸಂಸ್ಥೆಯ ವಿವಿಧ ವೇದಿಕೆಗಳಲ್ಲಿ ಪಾಕಿಸ್ತಾನವು ಕಾಶ್ಮೀರದ ಕುರಿತು ಪ್ರಸ್ತಾಪಿಸುತ್ತಲೇ ಇದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries