HEALTH TIPS

ಕೇರಳದಲ್ಲಿ ಮುಗಿಲುಮುಟ್ಟುತ್ತಿದೆ ವೃದ್ಧರ ಅಳಲು:ಸರ್ಕಾರವನ್ನು ಟೀಕಿಸಿದ ಸಿ. ದಿವಾಕರನ್

               ತಿರುವನಂತಪುರಂ: ಹಿರಿಯ ಸಿಪಿಐ ನಾಯಕ ಸಿ.ದಿವಾಕರನ್ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಲೋಕ ಕೇರಳ ಸಭೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಜನರು ಆಳುತ್ತಿದ್ದಾರೆ ಪಕ್ಷಗಳಲ್ಲ ಮತ್ತು ಜನರೇ ದೇವರೆಂಬುದನ್ನು ನೆನಪಿಡಿ ಎಂದು ಎಚ್ಚರಿಸಿದರು. 

                ಹಿರಿಯ ನಾಗರಿಕರ ಸೇವಾ ಮಂಡಳಿಯ ವಯೋವೃದ್ಧರ ಕಲ್ಯಾಣಕ್ಕಾಗಿ ಏನು ಮಾಡುತ್ತಿದೆ. ಬೀದಿಗೆ ಬಿದ್ದಿರುವ ವೃದ್ಧರು ಸರ್ಕಾರದ ಕಿರುಕುಳದಿಂದ ಹೈರಾಣರಾಗಿದ್ದಾರೆ.  ಲೋಕ ಕೇರಳ ಸಭೆಗೆ 4 ಕೋಟಿ ರೂ. ವೆಚ್ಚಮಾಡಲಾಗಿದ್ದು ಲೆಕ್ಕಕ್ಕೆ ಸಿಗದ ಇತರ ವಿಷಯಗಳು ಸಂಭವಿಸುತ್ತಿವೆ. ಮುಷ್ಕರದ ಅಲೆ ಬರುತ್ತಿದೆ ಎಂದು ದಿವಾಕರನ್ ಮಾತು ಮುಂದುವರಿಸಿದರು.

               ಸಮಾಜ ಕಲ್ಯಾಣ ಸಚಿವ ಆರ್. ಬಿಂದು ಅವರನ್ನೂ ಸಿ. ದಿವಾಕರನ್ ತೀವ್ರವಾಗಿ ಟೀಕಿಸಿದ್ದಾರೆ. ಬಿಂದು ಆದರೂ ಸರಿ, ಸಿಂಧು ಆದರೂ ಸರಿ, ಸಮಾಜ ಕಲ್ಯಾಣ ಇಲಾಖೆ ಹಿರಿಯರ ದಿನಾಚರಣೆಯನ್ನು ಆಚರಿಸಬೇಕಿತ್ತು. ವಯೋವೃದ್ಧರು ಸರ್ಕಾರದಿಂದ ಏನನ್ನೂ ನಿರೀಕ್ಷಿಸುವುದಿಲ್ಲ. ಮುಖ್ಯಮಂತ್ರಿಗೂ ವಯಸ್ಸಾಗುತ್ತಿದೆ, ಹುಷಾರಾಗಿರಿ. ಹಿರಿಯರ ಕೇಂದ್ರಗಳು ಇಂದು ವ್ಯಾಪಾರ ಕೇಂದ್ರಗಳಾಗಿವೆ. ಸೆಕ್ರೆಟರಿಯೇಟ್ ಯಾರೊಬ್ಬರ ಏಕಸ್ವಾಮ್ಯವಲ್ಲ ಎಂಬುದನ್ನು ಸರ್ಕಾರ ನೆನಪಿಟ್ಟುಕೊಳ್ಳಬೇಕು. ಸರ್ಕಾರ ಜನರ ಅಗತ್ಯಗಳನ್ನು ಕೇಳದೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries