ಕಾಸರಗೋಡು: ಜಿಲ್ಲಾಧಿಕಾರಿ ಕಚೇರಿ ಮಿನಿ ಸಮ್ಮೇಳನ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಮಾಹಿತಿ ಕಚೇರಿ ಹಾಗೂ ಅಕ್ಷರ ಗ್ರಂಥಾಲಯದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಾಚನ ಪಕ್ಷಾಚರಣೆ ಹಾಗೂ ಪಿ.ಎನ್.ಪಣಿಕ್ಕರ್ ಸ್ಮಾರಕ ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ಎಡಿಎಂ ಕೆ.ವಿ.ಶ್ರುತಿ ನೆರವೇರಿಸಿದರು. ಓದುವುದೇ ಜೀವನ ಕ್ರಮವಾಗಬೇಕು, ಓದಿನ ಮೂಲಕ ಚಿಂತನೆ ಮಾಡಿ ಸುಜ್ಞಾನ ಪಡೆಯಬೇಕು ಎಂದರು.
. ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕ ಜೇಸನ್ ಮ್ಯಾಥ್ಯೂ ಅಧ್ಯಕ್ಷತೆ ವಹಿಸಿದ್ದರು. ಕವಿ ದಿವಾಕರನ್ ವಿಷ್ಣುಮಂಗಲಂ ದಿಕ್ಸೂಚಿ ಭಾಷಣ ಮಾಡಿದರು. ಕಾಸರಗೋಡು ತಾಲೂಕು ಗ್ರಂಥಾಲಯ ಪರಿಷತ್ತಿನ ಅಧ್ಯಕ್ಷ ಇ.ಜನಾರ್ದನನ್ ಪಿ.ಎನ್.ಪಣಿಕ್ಕರ್ ಸಂಸ್ಮರಣಾ ಭಾಷಣ ಮಾಡಿದರು. ಹುಸೂರು ಶಿರಸ್ತೇದಾರ್ ಆರ್.ರಾಜೇಶ್ ವಾಚನ ದಿನಾಚರಣೆ ಪ್ರತಿಜ್ಞಾವಿಧಿ ವಾಚಿಸಿದರು. ಶಿಕ್ಷಣ ಇಲಾಖೆಯ ಉಪನಿರ್ದೇಶಕ ವಿ.ದಿನೇಶ ವಾಚನಾ ದಿನಾಚರಣೆ ಸಂದೇಶ ನೀಡಿದರು. ಸಾಕ್ಷರತಾ ಮಿಷನ್ ಜಿಲ್ಲಾ ಸಂಯೋಜಕ ಪಿ.ಎನ್.ಬಾಬು, ಅಕ್ಷರ ಗ್ರಂಥಾಲಯ ಅಧ್ಯಕ್ಷೆ ಅಸಲತಾ ಮಾತನಾಡಿದರು. ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂದನನ್ ಸ್ವಾಗತಿಸಿ, ಅಕ್ಷರ ಗ್ರಂಥಾಲಯದ ಕಾರ್ಯದರ್ಶಿ ಕೆ. ಮುಕುಂದನ್ ವಂದಿಸಿದರು. ಜಿಲ್ಲಾಧಿಕಾರಿ ಕಚೇರಿಯ ವಿವಿಧ ಇಲಾಖೆಗಳ ನೌಕರರು ಭಾಗವಹಿಸಿದ್ದರು.