ಮುಳ್ಳೇರಿಯ: ಮುಳ್ಳೇರಿಯ ಕಯ್ಯಾರ ಕಿಞ್ಞಣ್ಣ ರೈ ವಾಚನಾಲಯದಲ್ಲಿ ಕಾರ್ಯಾಚರಿಸುತ್ತಿರುವ ನವೋದಯ ಪುರುಷ ಸ್ವಸಹಾಯ ಸಂಗದ ಆಶ್ರಯದಲ್ಲಿ ಪೆರಿಯ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಜೀನೋಮಿಕ್ ವಿಜ್ಞಾನದಲ್ಲಿ ಪಿಎಚ್ಡಿ ಪಡೆದ ಬೇಂಗತ್ತಡ್ಕದ ಡಾ.ದೀಪ್ತಿ ಹಾಗೂ ಎಸ್ಎಸ್ಎಲ್ಸಿ ಪ್ಲಸ್ ಟು ತರಗತಿಗಳಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಸಂಘದ ಸದಸ್ಯರ ಮಕ್ಕಳನ್ನು ಅಭಿನಂದಿಸಿ ಗೌರವಿಸಲಾಯಿತು.
ಕೆ.ಕೆ.ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಗ್ರಂಥಾಲಯ ಪರಿಷತ್ ಸದಸ್ಯ ಬಿ. ರಾಧಾಕೃಷ್ಣನ್ ಉದ್ಘಾಟಿಸಿದರು. ದೀಪಕ್ ಮೋಹನ್ ಕೆ.ಕೆ., ದೇವಿಕಾ ಮೋಹನ್ ಕೆ.ಕೆ, ಹೇಮಂತ್ ಕುಮಾರ್ ಕೆ.ವೈ. ರಾಜೇಶ್ ಕುಮಾರ್.ಕೆ., ಜಯಪ್ರಕಾಶ್. ಟಿ., ಕೆ.ಗೋವಿಂದನ್, ಕೆ.ಕೆ.ರಂಜಿತ್. ಸುಂದರ ಮವ್ವಾರು ಮಾತನಾಡಿದರು.