HEALTH TIPS

ಪ್ರಧಾನಿಗೆ ಶುಭಕೋರಿ ನಮೋ ಬಳಗದಿಂದ ಮಲ್ಲಿಕಾರ್ಜುನ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮ

             ಕಾಸರಗೋಡು : “ನಮೋ ಅಭಿಮಾನಿ ಬಳಗ ಮಲ್ಲಿಕಾರ್ಜುನ ಕಾಸರಗೋಡು” ಇದರ ವತಿಯಿಂದ ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವಿಶ್ವ ನಾಯಕ ನರೇಂದ್ರ ಮೋದಿಜಿಯವರು ಸತತ ಮೂರನೇ ಬಾರಿಗೆ ಭಾರತದ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

          ಶ್ರೀ ವೆಂಕಟ್ರಮಣ ಮಹಿಳಾ ಭಜನಾ ವೃಂದದವರಿಂದ ಭಜನೆ, ಶ್ರೀ ವೆಂಕಟ್ರಮಣ ಬಾಲಗೋಕುಲದ ಮಕ್ಕಳಿಂದ ಕುಣಿತ ಭಜನೆ ನಡೆಯಿತು. ಶ್ರೀ ಹರಿನಾರಾಯಣ ಮಯ್ಯ ಕಣಿಪುರ ಇವರ ಆಚಾರ್ಯತ್ವದಲ್ಲಿ ಶ್ರೀ ದೇವರಿಗೆ ವಿಶೇಷ ಶ್ರೀರಂಗ ಪೂಜೆ ಮತ್ತು ಕಾರ್ತಿಕ ಪೂಜೆ ಜರಗಿತು. ಈ ಸಂಧರ್ಭದಲ್ಲಿ ಭಾರತೀಯ ಜನತಾ ಪಕ್ಷದ ಕಾಸರಗೋಡು ಜಿಲ್ಲಾಧ್ಯಕ್ಷರಾದ ರವೀಶ್ ತಂತ್ರಿ ಕುಂಟಾರು, ವಾರ್ಡು ಸದಸ್ಯೆ  ಶ್ರೀಲತಾ ಟೀಚರ್, ಜಿಲ್ಲಾ ಕಾರ್ಯದರ್ಶಿ ಉಮಾ ಕಡಪ್ಪುರ, ಕಾಸರಗೋಡು ಮಂಡಲ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಪ್ರಭು, ಧಾರ್ಮಿಕ, ಸಾಮಾಜಿಕ ಮುಂದಾಳು ಕೆ.ಎನ್. ವೆಂಕಟ್ರಮಣ ಹೊಳ್ಳ, ನಮೋ ಅಭಿಮಾನಿ ಬಳಗದ ಕಾರ್ಯಕರ್ತರಾದ ರಾಮಕೃಷ್ಣ ಹೊಳ್ಳ, ಕಿಶೋರ್ ಕುಮಾರ್, ಶಂಕರ ಅಡಿಗ, ರವಿ ಕೇಸರಿ, ಪುರಂದರ ಶೆಟ್ಟಿ, ಸಾಯಿನಾಥ್ ರಾವ್, ಶಿವಶಂಕರ ಅಡಿಗ, ಶ್ರೀಕಾಂತ್ ವೈ.ಎಸ್, ಪ್ರಮೋದ್, ರಾಮಕೃಷ್ಣ ರಾವ್, ಪ್ರೇಮ್‍ಜಿತ್, ನಾಮದೇವ್, ವಾರ್ಡ್ ಮಾಜಿ ಕೌನ್ಸಿಲರ್ ಶ್ರೀಮತಿ ವಿಜಯ ಶೆಟ್ಟಿ ಪಕ್ಷದ ಹಲವು ಗಣ್ಯರು ಕಾರ್ಯರ್ಕರು ಭಾಗವಹಿಸಿದರು. ಭಕ್ತಾದಿಗಳಿಗೆ ಸಿಹಿತಿಂಡಿ ಭೋಜನ ವ್ಯವಸ್ಥೆಯನ್ನು ಮಾಡಲಾಯಿತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries