HEALTH TIPS

ಕ್ಯಾಲಿಕಟ್ ವಿಶ್ವವಿದ್ಯಾಲಯದ ಸಿಂಡಿಕೇಟ್ ಗೆ ಎ.ಕೆ.ಅನುರಾಜ್ ಆಯ್ಕೆ

              ಕೋಯಿಕ್ಕೋಡ್: ಕೇಸರಿ ಮಹಾತ್ಮಾ ಗಾಂಧಿ ಕಾಲೇಜ್ ಆಫ್ ಮಾಸ್ ಕಮ್ಯುನಿಕೇಷನ್ ನಿರ್ದೇಶಕ ಹಾಗೂ ಹಿರಿಯ ಪತ್ರಕರ್ತ ಎ.ಕೆ.ಅನುರಾಜ್ ಅವರು ಕ್ಯಾಲಿಕಟ್ ವಿಶ್ವವಿದ್ಯಾಲಯದ ಸಿಂಡಿಕೇಟ್‍ಗೆ ಆಯ್ಕೆಯಾಗಿದ್ದಾರೆ.

               ಅನುರಾಜ್ ಸಾರ್ವತ್ರಿಕ ಚುನಾವಣೆಯಲ್ಲಿ ಸಾಮಾನ್ಯ ವರ್ಗದಲ್ಲಿ ಆಯ್ಕೆಯಾಗಿದ್ದರು. ರಾಜ್ಯಪಾಲರು ನಾಮನಿರ್ದೇಶನ ಮಾಡಿದ ಸದಸ್ಯರ ಪೈಕಿ ಅನುರಾಜ್ ಅವರು ಸಿಪಿಎಂ ಮತ್ತು ಕಾಂಗ್ರೆಸ್‍ನ ವಿರೋಧದ ಮಧ್ಯೆ ಆಯ್ಕೆಯಾದರು.

                 ಹನ್ನೆರಡು ಸದಸ್ಯರ ಸಿಂಡಿಕೇಟ್‍ಗೆ ಅನುರಾಜ್ ಹೊರತುಪಡಿಸಿ ಏಳು ಸಿಪಿಎಂ, ಇಬ್ಬರು ಕಾಂಗ್ರೆಸ್ ಮತ್ತು ಇಬ್ಬರು ಲೀಗ್ ಬೆಂಬಲಿಗರು ಆಯ್ಕೆಯಾದರು. ಎ.ಕೆ. ಅನುರಾಜ್, ಡಾ.ಟಿ.ಮುಹಮ್ಮದ್ ಸಲೀಂ, ಪಿಪಿ. ಸುಮೋದ್, ಡಾ. ಕೆ. ಮುಹಮ್ಮದ್ ಹನೀಫಾ, ಪಿ. ಸುಶಾಂತ್, ಡಾ. ಪ. ರಶೀದ್ ಅಹಮದ್, ಡಾ. ಕೆ. ಪ್ರದೀಪ್ ಕುಮಾರ್, ಎಂ.ಪಿ. ಫೈಸಲ್, ಪಿ. ಮಧು, ಇ. ಅಬ್ದುರ್ರಹೀಂ, ಸಿ.ಪಿ. ಹಮ್ಜಾ ಮತ್ತು ಟಿ.ಜೆ.ಮಾರ್ಟಿನ್ ಆಯ್ಕೆಯಾದವರು. ವಿದ್ಯಾರ್ಥಿ ಪ್ರತಿನಿಧಿಯಾಗಿ ಎಸ್‍ಎಫ್‍ಐನ ತಾಜುದ್ದೀನ್ ಆಯ್ಕೆಯಾದರು.

               ರಾಜ್ಯಪಾಲರ ಪ್ರತಿನಿಧಿಗಳಿಗೆ ಸೆನೆಟ್‍ನಲ್ಲಿ ಅವಕಾಶ ನೀಡುವುದಿಲ್ಲ ಎಂದು ಎಸ್‍ಎಫ್‍ಎ ಪ್ರತಿಭಟಿಸಿದ್ದು, ಮೊದಲ ಸಭೆಯಲ್ಲೇ ಅನುರಾಜ್ ಸೇರಿದಂತೆ 8 ಮಂದಿಯನ್ನು ಆಯ್ಕೆಮಾಡಲಾಯಿತು. 

                ‘ನೀವು ಆರ್‍ಎಸ್‍ಎಸ್‍ನವರು, ಸೆನೆಟ್ ಸಭೆಗೆ ಪ್ರವೇಶಿಸಲು ಬಿಡುವುದಿಲ್ಲ’ ಎಂದು ಅವರನ್ನು ವಿಶ್ವವಿದ್ಯಾಲಯದ ಗೇಟ್‍ನಲ್ಲಿ ನಿಲ್ಲಿಸಲಾಗಿತ್ತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries