HEALTH TIPS

ಸಪ್ಲೈಕೋ ಹೆಸರಲ್ಲಿ ವಂಚನೆ; ಮಾಜಿ ಆಹಾರ ಸಚಿವರ ಸಹಾಯಕ ಖಾಸಗಿ ಕಾರ್ಯದರ್ಶಿಯ ಬಂಧನ

               ಕೊಚ್ಚಿ: ಸಪ್ಲೈಕೋ ಹೆಸರಿನಲ್ಲಿ ಕೋಟಿಗಟ್ಟಲೆ ವಂಚನೆ ಮಾಡಿದ್ದ ಮಾಜಿ ಆಹಾರ ಸಚಿವ ಪಿ. ತಿಲೋತ್ತಮನ್ ಅವರ ಸಹಾಯಕ ಖಾಸಗಿ ಕಾರ್ಯದರ್ಶಿಯನ್ನು ಬಂಧಿಸಲಾಗಿದೆ.

              7 ಕೋಟಿ ವಂಚನೆ ಪ್ರಕರಣದಲ್ಲಿ ಬಂಧನದಲ್ಲಿರುವ ಕೊಚ್ಚಿಯ ಎಲ್ಲಂಕುಳಂ ನಿವಾಸಿ ಸತೀಶ್ ಚಂದ್ರನ್ ಮೂರು ತಿಂಗಳ ಕಾಲ ಸಚಿವ ತಿಲೋತ್ತಮನ್ ಅವರ ಆಪ್ತ ಸಿಬ್ಬಂದಿಯಲ್ಲಿದ್ದರು.

                ಬಂಧಿತ ಸತೀಶ್ ಚಂದ್ರನ್ ಸಪ್ಲೈಕೋ ಮಾನವ ಸಂಪನ್ಮೂಲ ಇಲಾಖೆಯ ನಿವೃತ್ತ ಸಹಾಯಕ ವ್ಯವಸ್ಥಾಪಕ. ಸತೀಶ್ ಚಂದ್ರನ್ ಅವರು ಉತ್ತರ ಭಾರತದ ಮೂರು ಕಂಪನಿಗಳಿಗೆ ಸಪ್ಲೈಕೋ ಕಂಪನಿಯ ನಕಲಿ ಖರೀದಿ ಆದೇಶ ನೀಡಿ 7 ಕೋಟಿ ರೂ.ಗೂ ಅಧಿಕ ಹಣವನ್ನು ದೋಚಿದ್ದು, ನಂತರ ಜೋಳ ಖರೀದಿಸಿ ಮಾರಾಟ ಮಾಡಿದ್ದಾರೆ. ನಕಲಿ ಲೆಟರ್‍ಹೆಡ್‍ನಲ್ಲಿ ಖರೀದಿ ಆದೇಶವನ್ನು ಸಿದ್ಧಪಡಿಸಿ ಬಳಿಕ ಸಪ್ಲೈಕೋನ ಜಿಎಸ್‍ಟಿ ಸಂಖ್ಯೆ ಬಳಸಿ ವಂಚನೆ ಮಾಡಲಾಗಿದೆ.

               ಸತೀಶ್ ಚಂದ್ರನ್ 2016 ರಲ್ಲಿ ಸಚಿವ ತಿಲೋತ್ತಮನ್ ಅವರ ಸಹಾಯಕ ಖಾಸಗಿ ಕಾರ್ಯದರ್ಶಿಯಾದರು. ಇದೇ ವೇಳೆ ಅವರ ಪದವಿ ನಕಲಿಯಾಗಿದ್ದು, ಅಕ್ರಮವಾಗಿ ಸಪ್ಲೈಕೋದಲ್ಲಿ ಉದ್ಯೋಗ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದು ಸೇರಿದಂತೆ ಹಲವು ಆರೋಪಗಳ ನಡುವೆಯೇ ಸತೀಶ್ ಚಂದ್ರನ್ ಅವರನ್ನು ವೈಯಕ್ತಿಕ ಸಿಬ್ಬಂದಿಯಿಂದ ವಜಾಗೊಳಿಸಲಾಗಿತ್ತು.

               ಕೆಲಸ ಕೊಡಿಸುವುದಾಗಿ ಹೇಳಿ ವಂಚಿಸಿದ್ದಾರೆ. ಕೊಚ್ಚಿ ಮೆಟ್ರೋದಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿ ಕೆಲಸ ಕೊಡಿಸುವುದಾಗಿ ಮಲಪ್ಪುರಂ ಮೂಲದವರಿಂದ 11 ಲಕ್ಷ ರೂಪಾಯಿ ಸುಲಿಗೆ ಮಾಡಲಾಗಿತ್ತು. ದೇವಸ್ವಂ ಬೋರ್ಡ್ ಕಾಲೇಜು, ಸಿವಿಲ್ ಸಪ್ಲೈಸ್, ಕ್ಯಾಂಪ್ಕೋ  ಮುಂತಾದ ಕಡೆ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ಹಲವರಿಂದ ಹಣ ವಸೂಲಿ ಮಾಡುತ್ತಿದ್ದ ತಂಡಕ್ಕೆ ಈತ ನಾಯಕ ಎಂದು ಪೋಲೀಸರು ತಿಳಿಸಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries