ಮಂಜೇಶ್ವರ: ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿಯಾಗಿ ನೇಮಕಗೊಂಡ ಸೂರಂಬೈಲು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಕೆ ರಾಜಗೋಪಾಲ ಅವರಿಗೆ ಶಾಲಾ ನೌಕರರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಪುತ್ತಿಗೆ ಗ್ರಾಮ ಪಂಚಾಯತಿ ಸದಸ್ಯೆ ಅನಿತಾಶ್ರೀ, ಪಿಟಿಎ ಅಧ್ಯಕ್ಷ ಬಾಬು ಪಿ, ಉಪಾಧ್ಯಕ್ಷ ರಮೇಶ್ ಕೆ, ಸದಸ್ಯ ದಯಾನಂದ ಪೆರ್ಣೆ, ಮಾತೃ ಸಂಘದ ಅಧ್ಯಕ್ಷೆ ವಿಶಾಲಾಕ್ಷಿ, ಶಾಲಾ ನೌಕರ ಸಂಘದ ಕಾರ್ಯದರ್ಶಿ ಕಿರಣ್ ಕೆ ಉಪಸ್ಥಿತರಿದ್ದರು.