HEALTH TIPS

ಕೇರಳ ಹೌಸ್‍ನಲ್ಲಿ ಕ್ರಿಶ್ಚಿಯನ್ ಚರ್ಚ್ ನಾಯಕರಿಗೆ ಔತಣಕೂಟ ಏರ್ಪಡಿಸಿದ ಕೆವಿ ಥಾಮಸ್

             ನವದೆಹಲಿ: ಕೇರಳ ಸರ್ಕಾರದ ಪ್ರತಿನಿಧಿ ಕೆ.ವಿ.ಥಾಮಸ್ ಅವರು ನವದೆಹಲಿಯ ಕೇರಳ ಹೌಸ್ ನಲ್ಲಿ ಕ್ರೈಸ್ತ ಚರ್ಚ್ ನಾಯಕರಿಗೆ ಔತಣಕೂಟ ಏರ್ಪಡಿಸಿದ್ದರು.

             ಮಲಂಕರ ಮೆಟ್ರೋಪಾಲಿಟನ್ ಜೋಸೆಫ್ ಮಾರ್ ಗ್ರೆಗೋರಿಯಸ್, ಆರ್ಚ್ ಬಿಷಪ್ ಕುರಿಯಾಕೋಸ್ ಭರ್ಣಿಕುಲಂಗರ ಮೊದಲಾದವರು ಔತಣಕೂಟದಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿದುಬಂದಿದೆ.

           ಕಾರ್ಯಕ್ರಮದಲ್ಲಿ ಸಿಪಿಎಂ ಕೇಂದ್ರ ಸಮಿತಿ(ಪಿಬಿ) ಸದಸ್ಯ ಎಂ.ಎ.ಬೇಬಿ ಕೂಡ ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ. ಔತಣಕೂಟಕ್ಕೆ ಹಿರಿಯ ಮಾಧ್ಯಮ ಪ್ರತಿನಿಧಿಗಳನ್ನೂ ಆಹ್ವಾನಿಸಲಾಗಿತ್ತು. ಇದೇ ವೇಳೆ ಕೇರಳ ಭವನದಲ್ಲಿ ಮುಖ್ಯಮಂತ್ರಿಗಳು ಹಾಜರಿದ್ದರೂ ಕಾರ್ಯಕ್ರಮಕ್ಕೆ ಆಹ್ವಾನ ನೀಡಿರಲಿಲ್ಲ.

             ಲೋಕಸಭೆ ಚುನಾವಣೆಯಲ್ಲಿ ಕೇರಳದಲ್ಲಿ ಸಿಪಿಎಂ ಕ್ರೈಸ್ತ ಮತಗಳನ್ನು ಪಡೆಯದ ಕಾರಣಕ್ಕೆ ಭಾರೀ ಹಿನ್ನಡೆ ಅನುಭವಿಸಿದೆ ಎಂಬುದು ಪಕ್ಷದ ಅಂದಾಜು. ಇದೇ ವೇಳೆ ಕೇರಳ ಹೌಸ್ ನಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು ಎನ್ನಲಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries